Advertisement

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

11:23 PM Apr 18, 2024 | Team Udayavani |

ಹೊಸದಿಲ್ಲಿ: ಗಲ್ಫ್ ರಾಷ್ಟ್ರದಲ್ಲಿ ಸುರಿದ ಅಭೂತಪೂರ್ವ ಮಳೆಯಿಂದಾಗಿ ಹಲವು ಕಡೆ ರಸ್ತೆ ತಡೆ ಉಂಟಾದ ಕಾರಣ ಒಲಿಂಪಿಕ್‌ ಅರ್ಹತಾ ಪಂದ್ಯದಲ್ಲಿ  ಪಾಲ್ಗೊಳ್ಳಲು ಕಿರ್ಗಿಸ್ಥಾನದ ಬಿಷ್ಕೆಕ್‌ಗೆ ತೆರಳಿದ್ದ ಭಾರತದ ಕುಸ್ತಿಪಟುಗಳಾದ ದೀಪಕ್‌ ಪೂನಿಯ ಮತ್ತು ಸುಜೀತ್‌ ಕಲಕಲ್‌ ಅವರು ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.

Advertisement

ಅವರಿಬ್ಬರು ಶುಕ್ರವಾರ ಬಿಷ್ಕೆಕ್‌ ನಲ್ಲಿ ನಡೆಯಲಿರುವ ಅರ್ಹತಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸ ಬೇಕಾಗಿದೆ. ಒಂದು ವೇಳೆ ಅವರಿಬ್ಬರು ನಿಗದಿತ ಸಮಯದೊಳಗೆ ಅಲ್ಲಿಗೆ ತಲುಪಲು ಸಾಧ್ಯವಾಗದಿದ್ದರೆ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತೇರ್ಗಡೆ ಯಾಗುವ ಸಾಧ್ಯತೆಯಿಲ್ಲ.

ರಷ್ಯಾದ ಕೋಚ್‌ ಕಮಲ್‌ ಮಾಲಿ ಕೋವ್‌ ಮತ್ತು ಫಿಸಿಯೋ ಶುಭಂ ಗುಪ್ತಾ ಅವರೊಂದಿಗೆ ತೆರಳಿದ್ದ ಕುಸ್ತಿಪಟು ಗಳು ಮಳೆಯಿಂದ ಉಂಟಾದ ಬಿಕ್ಕಟ್ಟಿನಿಂದಾಗಿ ವಿಮಾನ ನಿಲ್ದಾಣ ದಲ್ಲಿಯೇ ಮಲಗಬೇಕಾಯಿತು ಮಾತ್ರವಲ್ಲದೇ ಸರಿಯಾದ ಆಹಾರ ಕೂಡ ಅವರಿಗೆ ಸಿಗದೇ ತೊಂದರೆಗೆ ಒಳಗಾದರು.

Advertisement

Udayavani is now on Telegram. Click here to join our channel and stay updated with the latest news.

Next