Advertisement

ಖೇಲ್‌ರತ್ನ ವಂಚಿತ ಭಜರಂಗ್‌ ಆಕ್ರೋಶ

06:25 AM Sep 21, 2018 | Team Udayavani |

ಹೊಸದಿಲ್ಲಿ: ಭಾರತದ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ತಿರಸ್ಕರಿಸಲ್ಪಟ್ಟಿರುವ ಕುಸ್ತಿಪಟು ಭಜರಂಗ್‌ ಪೂನಿಯ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿಗೆ ತನ್ನ ಹೆಸರನ್ನು ಗಣ ನೆಗೆ ತೆಗೆದುಕೊಳ್ಳದಿದ್ದರೆ ಸರಕಾರದ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Advertisement

ಕಾಮನ್ವೆಲ್ತ್‌ ಗೇಮ್ಸ್‌,ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಜರಂಗ್‌ ಪೂನಿಯ ಅವರ ಹೆಸರನ್ನು ಭಾರತೀಯ ಕುಸ್ತಿ ಫೆಡರೇಶನ್‌ ಖೇಲ್‌ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಆದರೆ ಅಂತಿಮ ಯಾದಿಯಲ್ಲಿ ಇವರ ಹೆಸರನ್ನು ಕೈಬಿಡಲಾಗಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ವೇಟ್‌ ಲಿಫ್ಟರ್‌ ಮೀರಾ ಬಾಯಿ ಚಾನು ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಭಜರಂಗ್‌ ಪೂನಿಯ, ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

“ಈ ನಿರ್ಧಾರದಿಂದ ಬೇಸರ ಹಾಗೂ ಆಶ್ವರ್ಯವಾಗಿದೆ. ಹೀಗಾಗಿ ನಾನು ಕ್ರೀಡಾ ಸಚಿವರನ್ನು ಭೇಟಿಯಾಗಲು ನಿರ್ಧರಿಸಿದ್ದೇನೆ. ಯಾಕಾಗಿ ನನ್ನನ್ನು ಕಡೆಗಣಿಸಲಾಯಿತು ಎಂಬುದಕ್ಕೆ ಕಾರಣ ತಿಳಿಯಬೇಕಾಗಿದೆ’ ಎಂದು ಭಜರಂಗ್‌ ಪೂನಿಯ ಹೇಳಿದ್ದಾರೆ.

ಒಂದು ವೇಳೆ ಕ್ರೀಡಾ ಸಚಿವರನ್ನು ಒಪ್ಪಿಸಲು ಸಾಧ್ಯವಾಗದೇ ಇದ್ದರೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ಸಿದ್ಧರಾಗಿ ದ್ದೇನೆ ಎಂದೂ ಭಜರಂಗ್‌ ಹೇಳಿದರು.

Advertisement

“ಕಾನೂ ನಿನ ಸಹಾಯ ನನ್ನ ಕೊನೆಯ ಆಯ್ಕೆ. ಈ ಬಾರಿ ಖೇಲ್‌ ರತ್ನ ಪ್ರಶಸ್ತಿಗೆ ನಾನು ಅರ್ಹನಾಗಿದ್ದೆ. ಅದಕ್ಕಾಗಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೇನೆ. ವಿಶ್ವ ಚಾಂಪಿಯನ್‌ ಶಿಪ್‌ಗೆ ತಯಾರಾಗ ಬೇಕಾದ ಅಗತ್ಯವಿದ್ದು. ಈ ಸಮಸ್ಯೆಗೆ ನ್ಯಾಯಾ ಲಯದ ದಾರಿ ಹಿಡಿಯುವ ಸನ್ನಿವೇಶ ಎದುರಾಗದು ಎಂದು ನಂಬಿದ್ದೇನೆ’ ಎಂದು ಭಜರಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next