Advertisement

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

12:00 AM Oct 18, 2024 | Team Udayavani |

ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕುರಿತು ಸಭೆಗಳು ನಡೆಯುತ್ತಿವೆ. ಈ ವರ್ಷ 50 ಪ್ರತಿಭಾವಂತ ಮಹಿಳೆಯರು ಹಾಗೂ 50 ಪುರುಷರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಮುಡಾ ನಿವೇಶನದ ಬಗ್ಗೆ ಸುಮ್ಮನೆ ವಿವಾದ ಮಾಡಿದ್ದರಿಂದ ನಾವು ನಿವೇಶನ ವಾಪಸ್‌ ಕೊಟ್ಟಿದ್ದೇವೆ. ನಾವು ಕೊಟ್ಟಂತೆ ಬಿಜೆಪಿ, ಜೆಡಿಎಸ್‌ನವರು ನಿವೇಶನ ವಾಪಸ್‌ ಕೊಡಲಿ. ಈ ಬಗ್ಗೆಯೂ ತನಿಖೆಯಾಗಲಿ. ನಾವೇನು ನಿವೇಶನ ಕಸಿದುಕೊಂಡಿಲ್ಲ. ಬಿಜೆಪಿ ನಾಯಕರು ಎಸ್‌ಬಿಐ ಬಾಂಡ್‌ ಪ್ರಕರಣದ ವಿಚಾರದಲ್ಲಿ ರಾಜೀನಾಮೆ ಕೊಟ್ಟಿದ್ದಾರಾ? ಎಂದವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next