Advertisement

ಸಿಸಿಟಿವಿ ವೈರ್‌ ಕತ್ತರಿಸಿ 30 ಲಕ್ಷ ರೂ ಮೌಲ್ಯದ ಸಿಗರೇಟ್‌ ಕಳವು !

04:30 PM Jul 22, 2018 | Team Udayavani |

ರಾಯಚೂರು: ಯರಗೇರಾ ಲೇಔಟ್‍ನಲ್ಲಿರುವ ಜಿ.ಅಬ್ದುಲ್ ಸನ್ಸ್ ಐಟಿಸಿ ಏಜೆನ್ಸಿಯ ಗೋದಾಮಿಗೆ ನುಗ್ಗಿದ ಕಳ್ಳರು ಸಿಸಿಟಿವಿ ಕ್ಯಾಮರಾದ ವೈರ್‌ ಕತ್ತರಿಸಿ ಹಾಕಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್‌ಗಳನ್ನು ಮತ್ತು 2.5 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ. 

Advertisement

ಶನಿವಾರ ತಡರಾತ್ರಿ ಕಳ್ಳರು ಕೃತ್ಯ ಎಸಗಿದ್ದು , ಗೋದಾಮಿನ ಶೆಟರ್‌ ಮುರಿದು ಒಳ ನುಗ್ಗಿ ಅಪಾರ ಪ್ರಮಾಣದ ಸಿಗರೇಟ್‌ ಬಾಕ್ಸ್‌ಗಳನ್ನು ಕದ್ದೊಯ್ದಿದ್ದಾರೆ. 

ನೇತಾಜಿ ನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಸ್‌ಪಿ ಕಿಶೋರ್‌ ಬಾಬು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next