Advertisement

ಸರ್ಕಾರದ ಆದೇಶದಂತೆ ಪ್ರಭುಗಳ ಪುಣ್ಯಾರಾಧನೆ

10:21 PM Jan 17, 2022 | Team Udayavani |

ತೆಲಸಂಗ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಗ್ರಾಮ ಸೇರಿದಂತೆ ತೆಲಸಂಗ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು ಬರಬಹುದೆಂಬ ಕಾರಣಕ್ಕೆ ಕೆಲ ಅಂಗಡಿಕಾರರು ಪೂರ್ತಿ ಅಂಗಡಿ ಬಂದ್‌ ಮಾಡಿದ್ದರೆ, ಇನ್ನೂ ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.

Advertisement

ಬೆಳಗ್ಗಿನಿಂದಲೇ ಜನರ ಓಡಾಟ ಸಾಮಾನ್ಯವಾಗಿತ್ತು. ಬೀದಿ ವ್ಯಾಪಾರಿಗಳು, ರೈತರ ತರಕಾರಿ ಮಾರಾಟ, ವಾಹನ ಚಾಲಕರು ಕರ್ಫ್ಯೂ ವಿರುದ್ಧ ಕಿಡಿ ಕಾರಿದರು. ಕಳೆದ ಹಿಂದಿನ ಎರಡು ಕರ್ಫ್ಯೂಗಳಲ್ಲಿ ಮಾಡಿದ ಸಾಲ ಇನ್ನೂ ಮುಟ್ಟಿಸಲಾಗುತ್ತಿಲ್ಲ. ಇದೀಗ ಸರ್ಕಾರ ಮತ್ತೆ ಅದೇ ಪ್ರಸಂಗ ತಂದೊಡ್ಡಿದ್ದು, ನಾವು ಬದುಕು ಸಾಗಿಸುವುದು ಹೇಗೆ? ಎಂದು ಸರ್ಕಾರದ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾದವು.

ಒಟ್ಟಾರೆ ನಿತ್ಯ ದುಡಿದು ತಿನ್ನುವ ಹಾಗೂ ತಿರುಗಾಡಿ, ಸಂತೆ ಸಂತೆ ಮಾರಾಟ ಮಾಡಿಯೇ ಬದುಕುವ ಬಡಜನತೆಗೆ ಕರ್ಫ್ಯೂ ಎಫೆಕ್ಟ್ ತಗುಲಿದ್ದು ಬಿಟ್ಟರೆ ಬಸ್‌ ಸಂಚಾರ ಸೇರಿದಂತೆ ಉಳಿದೆಲ್ಲವೂ ಸಾಮಾನ್ಯವಾಗಿತ್ತು

 

Advertisement

Udayavani is now on Telegram. Click here to join our channel and stay updated with the latest news.

Next