Advertisement

ಪದ್ಮನಾಭ ದೇಗುಲಕ್ಕೆ ತಟ್ಟಿದ ಆರ್ಥಿಕ ಬಿಕ್ಕಟ್ಟು; ನೆರವಿಗೆ ಮನವಿ

01:38 AM Jan 06, 2022 | Team Udayavani |

ತಿರುವನಂತಪುರ: ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಪತ್ತು ಹೊಂದಿರುವ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲಕ್ಕೆ ಈಗ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ.

Advertisement

ಹೀಗಾಗಿ ನೆರವು ನೀಡುವಂತೆ ದೇಗುಲದ ಆಡಳಿತ ಮಂಡಳಿಯ ನೇತೃತ್ವ ವಹಿಸಿರುವ ತಿರುವಾಂಕೂರು ರಾಜ ಮನೆತನದ ಮೂಲಂ ತಿರುನಾಳ್‌ ರಾಮ ವರ್ಮ ಕೇರಳ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಏರಿಕೆಯಾದ ಬಳಿಕ ದೇಗುಲದ ಆದಾಯದಲ್ಲಿ ಇಳಿಕೆಯಾಗಿದೆ. ರಾಜ್ಯ ಸರಕಾರದಿಂದ 2 ಕೋಟಿ ರೂ. ಆರ್ಥಿಕ ನೆರವು ಈಗಾಗಲೇ ಮಂಜೂರಾಗಿದೆ ಎಂದು ರಾಜಮನೆತನದ ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ. ದೇಗುಲದಲ್ಲಿ 200 ಮಂದಿ ಖಾಯಂ ಮತ್ತು ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಸಿಬಂದಿ ಇದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next