Advertisement

World Cup; ಯಾವ ತಂಡವನ್ನೂ ಸೋಲಿಸಬಲ್ಲೆವು: ನೆದರ್ಲೆಂಡ್ಸ್‌ ನಾಯಕ ಎಡ್ವರ್ಡ್ಸ್‌

11:54 PM Oct 18, 2023 | Team Udayavani |

ಧರ್ಮಶಾಲಾ: ವಿಶ್ವಕಪ್‌ನ “ಹಿಸ್ಟಾರಿಕ್‌ ಅಪ್‌ಸೆಟ್‌’ ಪರಾಕ್ರಮದಿಂದ ನೆದರ್ಲೆಂಡ್ಸ್‌ ತಂಡ ಭಾರೀ ಸುದ್ದಿಯಲ್ಲಿದೆ. ವಿಶ್ವಕಪ್‌ ಇತಿಹಾಸ ದಲ್ಲೇ ಸರ್ವಾಧಿಕ ರನ್‌ ಗಳಿಸಿದ ದಕ್ಷಿಣ ಆಫ್ರಿಕಾ ವನ್ನು ಧರ್ಮ ಶಾಲಾ ದಲ್ಲಿ ನೆಲಕ್ಕೆ ಕೆಡವಿ ನಗು ಹೊಮ್ಮಿಸಿದೆ. ಇದರಿಂದ ಕೂಟದ ದೊಡ್ಡ ದೊಡ್ಡ ತಂಡಗಳಿಗೆ ಸಹಜವಾಗಿಯೇ ಭೀತಿ ಆವರಿಸಿದೆ.

Advertisement

ಈ ಐತಿಹಾಸಿಕ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನೆದರ್ಲೆಂಡ್ಸ್‌ ತಂಡದ ನಾಯಕ ಸ್ಕಾಟ್‌ ಎಡ್ವರ್ಡ್ಸ್‌, ನಾವು ಇದೇ ರೀತಿಯಲ್ಲಿ ಆಡುತ್ತ ಹೋದರೆ ಯಾವ ತಂಡವನ್ನು ಬೇಕಾದರೂ ಮಣಿಸಬಲ್ಲೆವು ಎಂದಿದ್ದಾರೆ.

“ಎಲ್ಲ ತಂಡಗಳಂತೆ ನಾವು ಇಲ್ಲಿಗೆ ಬಂದಿರುವುದು ಗೆಲ್ಲಲಿಕ್ಕೇ ಹೊರತು ಲೆಕ್ಕದ ಭರ್ತಿಗಲ್ಲ. ಪ್ರತಿ ಯೊಂದು ಪಂದ್ಯವಲ್ಲದಿದ್ದರೂ ಕೆಲವು ಪಂದ್ಯಗಳನ್ನಾದರೂ ಜಯಿ ಸು ವುದು ನಮ್ಮ ಯೋಜನೆ. ರ್‍ಯಾಂಕಿಂಗ್‌ ಮಾನದಂಡದಂತೆ ಎಲ್ಲವೂ ನಮಗಿಂತ ಮೇಲ್ಮಟ್ಟದ ತಂಡ ಗಳೇ ಆಗಿವೆ. ಹೀಗಾಗಿ ನಾವು ಯಾವ ತಂಡವನ್ನು ಮಣಿಸಿದರೂ ಅದೊಂದು ಇತಿಹಾಸವಾಗುತ್ತದೆ. ಇಲ್ಲಿ ದೊಡ್ಡ ಹಾಗೂ ಬಲಿಷ್ಠ ತಂಡ ವಾದ ದಕ್ಷಿಣ ಆಫ್ರಿಕಾವನ್ನು ಕೆಡವಿ ದ್ದೇವೆ. ಇದೇ ಸಾಮರ್ಥ್ಯವನ್ನು ಮುಂದು ವರಿಸಿಕೊಂಡು ಹೋದರೆ ನಾವು ಯಾವ ತಂಡವನ್ನೂ ಸೋಲಿಸ ಬಲ್ಲೆವು…’ ಎಂಬುದಾಗಿ ಎಡ್ವರ್ಡ್ಸ್‌ ಆತ್ಮವಿಶ್ವಾಸದಿಂದ ನುಡಿದರು.

ಕೇವಲ 3ನೇ ಗೆಲುವು
ಇದು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ ಸಾಧಿಸಿದ ಕೇವಲ 3ನೇ ಜಯ. ಅದೂ 16 ವರ್ಷಗಳ ಬಳಿಕ ಒಲಿದ ಗೆಲುವು. ಇದಕ್ಕೂ ಮೊದಲು 2003ರಲ್ಲಿ ನಮೀಬಿಯಾವನ್ನು, 2007ರಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿತ್ತು. ಆದರೆ ದೊಡ್ಡ ತಂಡವೊಂದನ್ನು ಹೊಡೆ ದುರುಳಿಸಿದ್ದು ಇದೇ ಮೊದಲು.
“ನಾವು ಅರ್ಹತಾ ಸುತ್ತಿನಿಂದ ಬಂದವರು. ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಕೂಡಲೇ ನಾವು ಮಾನಸಿಕವಾಗಿ ಸಜ್ಜಾದೆವು. ಇಲ್ಲಿಗೆ ಮಜಾ ಮಾಡಲು ಬಂದದ್ದಲ್ಲ. ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದು ಮುಂದಿನ ಹಂತದಲ್ಲಿ ಗುರುತಿಸಿಕೊಳ್ಳುವುದು ನಮ್ಮ ಯೋಜನೆ’ ಎಂದರು.
ಪ್ರಯತ್ನ ಜಾರಿಯಲ್ಲಿರುತ್ತದೆ

“ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ತಂಡ. ಸೆಮಿಫೈನಲ್‌ ಸಾಧ್ಯತೆಯನ್ನು ಬಹು ತೇಕ ತೆರೆದಿರಿಸಿದ ತಂಡ. ನಾವು ಕೂಡ ಇದೇ ಹಂತಕ್ಕೆ ಏರಬೇಕಾದರೆ ಇಂಥ ತಂಡಗಳನ್ನು ಸೋಲಿಸುವುದು ಅನಿ ವಾರ್ಯ. ಅಂದಮಾತ್ರಕ್ಕೆ ಮುಂದಿನ ಸುತ್ತು ತಲುಪುತ್ತೇವೆ ಎಂದಲ್ಲ. ಆದರೆ ಪ್ರಯತ್ನ ಜಾರಿಯಲ್ಲಿರುತ್ತದೆ’ ಎಂಬುದು ನೆದರ್ಲೆಂಡ್ಸ್‌ ಕಪ್ತಾನನ ಅನಿಸಿಕೆ.

Advertisement

ಟೋಟಲ್‌ ಕ್ರಿಕೆಟ್‌
“ಒಂದು ತಂಡವಾಗಿ ನಾವು ಅತ್ಯು ತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಇದನ್ನೇ “ಟೋಟಲ್‌ ಕ್ರಿಕೆಟ್‌’ ಎನ್ನು ವುದು. ನಾನು ಸರಿಯಾದ ಹೊತ್ತಿನಲ್ಲಿ ಬ್ಯಾಟಿಂಗ್‌ನಲ್ಲಿ ಸೆಟ್‌ ಆದೆ. ರೋಲ್ಫ್ ಮತ್ತು ಆರ್ಯನ್‌ ಕೊನೆಯ ಹಂತ ದಲ್ಲಿ ನಂಬಲಾಗದ ಆಟ ಪ್ರದರ್ಶಿ ಸಿದರು. ಹೀಗಾಗಿ ನಮ್ಮಿಂದ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು. ಬೌಲಿಂಗ್‌ ಬೊಂಬಾಟ್‌ ಆಗಿತ್ತು. ಇಲ್ಲಿಂದ ಮುಂದುವರಿಯಬೇಕಿದೆ…’ ಎಂದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರ ರಾದ, ವಿಕೆಟ್‌ ಕೀಪರ್‌ ಕೂಡ ಆಗಿರುವ ಸ್ಕಾಟ್‌ ಎಡ್ವರ್ಡ್ಸ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next