Advertisement

ಯಾವುದೇ ಕಾರಣಕ್ಕೂ KSOU ಮುಚ್ಚಲು ಬಿಡುವುದಿಲ್ಲ;ರಾಮ್‌ದಾಸ್‌ 

04:35 PM Oct 01, 2017 | Team Udayavani |

ಮೈಸೂರು : ‘ಸರ್ಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯವನ್ನು ಮುಚ್ಚಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಾವು ಹೋರಾಟ ಮಾಡುತ್ತೇವೆ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್‌.ಎ.ರಾಮ್‌ದಾಸ್‌ ಹೇಳಿದ್ದಾರೆ. 

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮ್‌ದಾಸ್‌ ಸರ್ಕಾರ ದೇಶದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಮುಕ್ತ ವಿವಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಸರ್ಕಾರ ಅದನ್ನು ಮುಚ್ಚಲು ಮುಂದಾಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.ವಿವಿ ಮುಚ್ಚಿದಲ್ಲಿ ನೊಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ.

ಯಾವುದೇ ಕಾರಣಕ್ಕೂ ವಿವಿ ಮುಚ್ಚಲು ಅವಕಾಶ ನೀಡುವುದಿಲ್ಲ. ಮುಕ್ತ ವಿ.ವಿ.ಆವರಣದಲ್ಲಿ  ಅಕ್ಟೋಬರ್‌ 8 ರಂದು ನೊಂದ ವಿದ್ಯಾರ್ಥಿಗಳ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು. 

ವಿವಿಗೆ ಮಾನ್ಯತೆ ನವೀಕರಿಸಲು ಯುಜಿಸಿ ನಿರಾಕರಿಸಿದ ಬೆನ್ನಲ್ಲೇ ಉನ್ನತ ಶಿಕ್ಷಣ  ಸಚಿವ ಬಸವರಾಜ ರಾಯರೆಡ್ಡಿ ಅವರು ವಿವಿ ಮುಚ್ಚುವ ಸೂಚನೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next