Advertisement

ಬೆಂಗಳೂರು: ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ಪತ್ರಕರ್ತೆ ಶವವಾಗಿ ಪತ್ತೆ

04:43 PM Mar 24, 2022 | Team Udayavani |

ಬೆಂಗಳೂರು: ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನಗರದ ವೈಟ್‌ಫೀಲ್ಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಕೇರಳ ಮೂಲದ ಶ್ರುತಿ ನಾರಾಯಣನ್ (35) ಎನ್ನುವವರು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ, ಪತ್ತೆಯಾಗಿದ್ದಾರೆ.

ಪತಿ ಕೇರಳಕ್ಕೆ ತೆರಳಿದ್ದ ವೇಳೆ ಶ್ರುತಿ ಸಾವನ್ನಪ್ಪಿದ್ದು, ಆಕೆಯ ತಾಯಿ ನಿರಂತರ ಕರೆ ಮಾಡಿದರೂ ಸ್ವೀಕರಿಸದೆ ಇದ್ದಾಗ ಅನುಮಾನ ಗೊಂಡು ಆಕೆಯ ಸಹೋದರ ಭದ್ರತಾ ಸಿಬ್ಬಂದಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ. ಈ ವೇಳೆ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಶ್ರುತಿ 2017 ರಲ್ಲಿ ಅನೀಶ್ ಅವರನ್ನು ವಿವಾಹವಾದರು ಮತ್ತು ಇಬ್ಬರೂ ವೈಟ್‌ಫೀಲ್ಡ್‌ನ ನೆಲ್ಲೂರ ಹಳ್ಳಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಇಬ್ಬರ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಕುಟುಂಬಸ್ಥರು ಮತ್ತು ಬೆಂಗಳೂರಿನಲ್ಲೇ ಇರುವ ಶ್ರುತಿ ಸಹೋದರ ಅನೀಶ್ ಹೇಳಿದ್ದಾರೆ. ಕುಟುಂಬಸ್ಥರು ಸಾವಿನ ಕುರಿತು ಶಂಕಿಸಿ, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next