Advertisement

ಮಹಿಳಾ ನಕ್ಸಲ್‌ ನೇತೃತ್ವ

07:25 AM Sep 25, 2018 | Karthik A |

ವಿಶಾಖಪಟ್ಟಣ: ಟಿಡಿಪಿ ಶಾಸಕ ಕಿದರಿ ಸರ್ವೇಶ್ವರ ರಾವ್‌ ಮತ್ತು ಪಕ್ಷದ ನಾಯಕ ಸಿವಾರಿ ಸೋಮು ಹತ್ಯೆಗೆ ನಕ್ಸಲರ ಮಹಿಳಾ ನಾಯಕಿ ಅರುಣ ಎಂಬವಳೇ ನೇತೃತ್ವ ವಹಿಸಿದ್ದಳು. ಆಕೆ ಸಿಪಿಐ ಮಾವೋವಾದಿ ಆಂಧ್ರ -ಒಡಿಶಾ ಗಡಿ ಸಮಿತಿ ಸದಸ್ಯೆ ಎಂದು  ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ. 12 ದಿನಗಳ ಹಿಂದೆ ಅರುಣಾ ಅರಕುವಿಗೆ ಭೇಟಿ ನೀಡಿ, ಯಾವ ರೀತಿ ಹತ್ಯೆ ನಡೆಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಳು. ಜತೆಗೆ ಘಟನೆಯ ದಿನ 20-50 ನಕ್ಸಲರು ಅಲ್ಲಿ ಉಪಸ್ಥಿತರಿದ್ದರು ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next