Advertisement

Tirumala ;ದೇಗುಲದ ಸಂಕೀರ್ಣದೊಳಗೆ ಮಹಿಳೆಯ ತಲೆಯ ಮೇಲೆ ಬಿದ್ದ ಬೃಹತ್ ಮರದ ಕೊಂಬೆ: Video

06:44 PM Jul 12, 2024 | Team Udayavani |

ತಿರುಮಲ: ಆಂಧ್ರಪ್ರದೇಶದ ತಿರುಮಲ ದೇಗುಲದ ಸಂಕೀರ್ಣದೊಳಗೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಮಹಿಳಾ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಘಟನೆಯ ವಿಡಿಯೋ ಸೆರೆಯಾಗಿದೆ.

Advertisement

ಈ ಘಟನೆಯು ಪವಿತ್ರ ಜಲಮೂಲವಾದ ಜಪಾಲಿ ತೀರ್ಥಂನಲ್ಲಿ ಸಂಭವಿಸಿದೆ. ಭಕ್ತೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಮೀಪದ ಮರದ ಕೊಂಬೆಯೊಂದು ಏಕಾಏಕಿ ಮುರಿದು ಆಕೆಯ ಮೇಲೆ ಬಿದ್ದಿವೆ.

ದೇವಸ್ಥಾನದ ಸಿಬಂದಿ ಗಾಯಾಳುವನ್ನು ತತ್ ಕ್ಷಣ ಆಸ್ಪತ್ರೆಗೆ ಸಾಗಿಸಿದರು. ಮೂಲಗಳ ಪ್ರಕಾರ, ಆಕೆಯ ಬೆನ್ನುಹುರಿಗೆ ಗಂಭೀರವಾದ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊಂಬೆ ತುಂಡಾಗಿ ಬೀಳಲು ಕಾರಣವನ್ನು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ.

ಜಪಾಲಿ ಹನುಮಾನ್ ದೇವಸ್ಥಾನ ತಿರುಮಲ ದೇವಸ್ಥಾನದ ಬಳಿ, ಪಾಪವಿನಾಶಕ್ಕೆ ಹೋಗುವ ದಾರಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next