Advertisement

Tirupati ತಿರುಮಲದಲ್ಲಿ ಜಲಸಂಕಷ್ಟ: ಮಿತಬಳಕೆಗೆ ಟಿಟಿಡಿ ಮನವಿ

01:59 AM Aug 26, 2024 | Team Udayavani |

ತಿರುಮಲ: ತಿರುಮಲದಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಮುಂದಿನ 130 ದಿನಗಳವರೆಗಷ್ಟೇ ನೀರಿನ ಲಭ್ಯತೆಯಿರಲಿದೆ ಎಂದು ವರದಿಯಾಗಿದೆ. ಈ ಬಿಕ್ಕಟ್ಟು ನಿವಾರಣೆಗೆ ಕಲ್ಯಾಣಿ ಅಣೆಕಟ್ಟಿ ನಿಂದ ನಿತ್ಯ 95 ಲಕ್ಷ ಲೀ. ನೀರು ತೆಗೆದು ಕೊಳ್ಳಲಾಗುವುದು ಎಂದು ತಿರು ಮಲ ತಿರುಪತಿ ದೇವಸ್ಥಾನ ಸಂಸ್ಥೆ (ಟಿಟಿಡಿ)ಯ ಕಾರ್ಯನಿರ್ವಾಹಕ ಅಧಿ ಕಾರಿ ಜಿ.ಶ್ಯಾಮಲಾ ರಾವ್‌ ಶನಿ ವಾರ ಹೇಳಿದ್ದಾರೆ. ಜತೆಗೆ ನೀರು ಪೂರೈಕೆ ಗಾಗಿ 40 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

Advertisement

ಮುಂಗಾರು ಮಳೆ ವೈಫ‌ಲ್ಯವಾದ ಹಿನ್ನೆಲೆಯಲ್ಲಿ ತಿರುಮಲದ ಸುತ್ತಲಿನ ಪಾಪ ವಿನಾಶನಂ, ಗೋಗರ್ಭ, ಆಕಾಶ ಗಂಗಾ, ಕುಮಾರಧಾರ -ಪಶುಪುಧಾರಾ ಸೇರಿ ಹಲವು ಅಣೆಕಟ್ಟುಗಳು ಕ್ರಮೇಣ ಡೆಡ್‌ ಸ್ಟೋರೇಜ್‌ಗೆ ಇಳಿಯಲಿವೆ. ಈ ಅಣೆಕಟ್ಟುಗಳಲ್ಲಿ ಈಗ 173 ಕೋಟಿ ಲೀ.ನಷ್ಟು ನೀರಿದೆ. ನಿತ್ಯ ತಿರುಮಲಕ್ಕೆ 1.58 ಕೋಟಿ ಲೀ. ನೀರು ಅಗತ್ಯವಿದೆ.
ತಿರುಮಲಕ್ಕೆ ಪ್ರಮುಖ ಜಲಮೂಲ ವಾಗಿರುವ ಕಲ್ಯಾಣಿ ಅಣೆಕಟ್ಟಿನಲ್ಲೂ ಪ್ರಸ್ತುತ 212 ಕೋಟಿ ಲೀ. ನೀರು ಲಭ್ಯವಿ ದೆ. ಹಾಗಾಗಿ ಮಿತವಾಗಿ ನೀರು ಬಳಸಿದರೂ 130 ದಿನಗಳಷ್ಟು ಮಾತ್ರ ಲಭ್ಯವಿರಲಿದೆ. ಆದ್ದರಿಂದ ತಿರುಮಲದ ಜನತೆ ಮಿತವಾಗಿ ನೀರು ಬಳಸಬೇ ಕೆಂದು ಟಿಟಿಡಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next