Advertisement

Badagannur; ನೀರಿನ ತೊಟ್ಟಿಗೆ ಬಿದ್ದು ಮಹಿಳೆ ಸಾವು

10:09 PM Jan 17, 2024 | Team Udayavani |

ಬಡಗನ್ನೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮೀ (47) ಅವರು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ಜ. 17 ರಂದು ಕೈಕಾರದಲ್ಲಿ ಸಂಭವಿಸಿದೆ.

Advertisement

ಕೈಕಾರದಲ್ಲಿರುವ ತಮ್ಮ ಮನೆಯ ಎದುರಿನ ಗುಡ್ಡದಲ್ಲಿ ಟಾರ್ಪಲ್‌ ಹಾಕಿ ನಿರ್ಮಿಸಿರುವ ನೀರಿನ ತೊಟ್ಟಿಯ ಬಳಿಗೆ ತೆರಳಿದ್ದ ಶುಭಲಕ್ಷ್ಮೀ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ತೊಟ್ಟಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ತೊಟ್ಟಿಯ ಬಳಿ ಶುಭಲಕ್ಷ್ಮೀಯವರ ಎರಡೂ ಪಾದರಕ್ಷೆ ಪತ್ತೆಯಾಗಿದ್ದು, ಕಾಲು ಜಾರಿದ ಗುರುತು ಕೂಡ ಇತ್ತೆನ್ನಲಾಗಿದೆ.

ತೊಟ್ಟಿಯಲ್ಲಿ ಮೀನು ಸಾಕಣೆ ಮಾಡಲಾಗುತ್ತಿತ್ತು. ಇದನ್ನು ನೋಡಲು ತೆರಳಿದವರು ನೀರಿನ ತೊಟ್ಟಿಗೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಶುಭಲಕ್ಷ್ಮೀಯವರ ಪತಿ ಪ್ರಕಾಶ್ಚಂದ್ರ ರೈ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next