Advertisement

‘ಇಂದು ಸರ್ಕಾರ್‌’ಚಿತ್ರಕ್ಕೆ ತಡೆ ಕೋರಿದ ‘ಸಂಜಯ್‌ ಗಾಂಧಿ ಪುತ್ರಿ’

04:45 PM Jul 22, 2017 | Team Udayavani |

ಮುಂಬಯಿ : ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌ ಗಾಂಧಿ ಅವರಿಗೆ ಜನಿಸಿದ ಪುತ್ರಿ ತಾನು ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್‌ ಎಂಬ ಮಹಿಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಮಧುರ್‌ ಭಂಡಾರ್‌ಕರ್‌ ಅವರ ಮುಂಬರುವ  “ಇಂದು ಸರ್ಕಾರ್‌’ ಚಿತ್ರಕ್ಕೆ ತಡೆ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಲೇರಿದ್ದಾರೆ. 

Advertisement

ಎಪ್ಪತ್ತರ ದಶಕದಲ್ಲಿ ದೇಶ ಕಂಡಿದ್ದ ಕರಾಳ ತುರ್ತು ಪರಿಸ್ಥಿತಿಯ ಹಿನ್ನೆಲೆಯನ್ನು ಹೊಂದಿರುವ ತನ್ನ “ಇಂದು ಸರ್ಕಾರ್‌’ ಸಿನೇಮಾದ ಶೇ.30 ಭಾಗ ಸತ್ಯಾಂಶ ಹೊಂದಿದ್ದು ಉಳಿದ ಭಾಗ ಕಾಲ್ಪನಿಕವಾಗಿದೆ ಎಂದು ಈಚೆಗೆ ಮಧುರ್‌ ಭಂಡಾರ್‌ಕರ್‌ ಹೇಳಿಕೊಂಡಿದ್ದರು. 

ಭಂಡಾರ್‌ಕರ್‌ ಅವರು ತಮ್ಮ ಇಂದು ಸರ್ಕಾರ್‌ ಚಿತ್ರದಲ್ಲಿ ‘ಸತ್ಯ ಯಾವುದು ಕಟ್ಟು ಕಥೆ ಯಾವುದು’ ಎಂಬುದನ್ನು ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಪ್ರಿಯಾ ಪೌಲ್‌ ನಿನ್ನೆ ಶುಕ್ರವಾರ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 

ತುರ್ತು ಪರಿಸ್ಥಿತಿಯ ವೇಳೆ ನೆಗೆಟೀವ್‌ ಹೀರೋ ಆಗಿ ಮೆರೆದಿದ್ದ ಸಂಜಯ್‌ ಗಾಂಧಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿರುವ ಸಾಧ್ಯತೆಯನ್ನು ಪ್ರಿಯಾ ಪೌಲ್‌ ಶಂಕಿಸಿ ಚಿತ್ರದ ತಡೆಗೆ ಹೈಕೋರ್ಟಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. 

ಮಧುರ್‌ ಭಂಡಾರ್‌ಕರ್‌ ಅವರ ಇಂದು ಸರ್ಕಾರ್‌ ಸಿನೇಮಾ ಜು.28ರಂದು ತೆರೆ ಕಾಣಲಿದೆ. 

Advertisement

ಭಂಡಾರ್‌ಕರ್‌ ಅವರು ತಮ್ಮ ಇಂದು ಸರ್ಕಾರ್‌ ಚಿತ್ರದಲ್ಲಿನ ನಿಜದ ಭಾಗವನ್ನು ತೆಗೆದು ಹಾಕುವ ವರೆಗೆ ಅವರ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಪ್ರಿಯಾ ಪೌಲ್‌ ತಮ್ಮ ಅರ್ಜಿಯಲ್ಲಿ  ಆಗ್ರಹಿಸಿದ್ದಾರೆ. 

ಸೆನ್ಸಾರ್‌ ಮಂಡಳಿ ಇಂದು ಸರ್ಕಾರ್‌ ಚಿತ್ರಕ್ಕೆ 12 ಕಟ್‌ಗಳನ್ನು ಆದೇಶಿಸಿ ಯು/ಎ ಸರ್ಟಿಫಿಕೇಟ್‌ ನೀಡಿದೆ. ಪ್ರಿಯಾ ಪೌಲ್‌ ಅವರ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಜುಲೈ 24ರಂದು ನಡೆಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next