Advertisement

ಯುವತಿಗೆ ಜಾಮೀನು

08:10 AM Sep 05, 2018 | Team Udayavani |

ಚೆನ್ನೈ: ಟ್ಯುಟಿಕೋರಿನ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷೆಯ ಮುಂದೆಯೇ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದ ಯುವತಿಗೆ ಮಂಗಳವಾರ ಇಲ್ಲಿನ ಕೋರ್ಟ್‌ ಬೇಷರತ್‌ ಜಾಮೀನು ನೀಡಿದೆ. ಕೆನಡಾ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ 28ರ ಲೂಯಿಸ್‌ ಸೋಫಿಯಾ ಸೋಮವಾರ ಸ್ವದೇಶಕ್ಕೆ ವಾಪಸಾದಾಗ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ಅಧ್ಯಕ್ಷೆ ತಮಿಳ್‌ಸಾಯಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಂಧಿಸಲಾಗಿತ್ತು. ಇದೇ ವೇಳೆ, ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್‌, ಡಿಎಂಕೆ, ಕಮಲ್‌ ಹಾಸನ್‌ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಯುವತಿಗೆ ಬೆಂಬಲ ನೀಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next