Advertisement

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಎಸ್‌ವೈಯಿಂದ ವಾಮಾಚಾರ

06:00 AM Dec 01, 2018 | |

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ವಾಮಾಚಾರ ಮಾಡಿಸುತ್ತಿದ್ದಾರೆ. ಇದಕ್ಕಾಗಿಯೇ ಪದೇಪದೆ ಕೇರಳಕ್ಕೆ ಹೋಗುತ್ತಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಕೇರಳಕ್ಕೆ ಪದೇಪದೆ ಹೋಗಿ ಪ್ರಸಿದ್ಧ ಮಾಂತ್ರಿಕರ ಬಳಿ ಮಾಟ-ಮಂತ್ರ ಮಾಡಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು, ಇಲ್ಲವೇ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ವಾಮಾಚಾರ ಮಾಡುವ ಮೂಲಕ ಹೊಂಚು ಹಾಕುತ್ತಿದ್ದಾರೆ. ಕಳೆದ ಬಾರಿ ಅಮವಾಸ್ಯೆ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರ ಜೊತೆಯಲ್ಲಿ ಮಂಗಳೂರಿನಲ್ಲಿ ನನಗೆ ಸಿಕ್ಕಿದ್ದರು. ಆಗ ನಾನು ಮಾಹಿತಿ ಪಡೆದಿದ್ದು, ಅವರಿಬ್ಬರೂ ಕೇರಳಕ್ಕೆ ಹೋಗಿ ಬಂದಿದ್ದಾರೆ. ಕೇರಳಕ್ಕೆ ಹೋದ ಸಂದರ್ಭದಲ್ಲಿ ಅವರು  ಮಾಟ-ಮಂತ್ರ ಮಾಡಿಕೊಂಡೇ ಬಂದಿದ್ದಾರೆ. ಈಗ ಇವರು ಕೇರಳಕ್ಕೆ ಹೋದರು ಎಂದರೆ ಯಾರಧ್ದೋ ಜೀವನ ಹಾಳು ಮಾಡಲು ಹೋಗಿರುತ್ತಾರೆ ಎಂದೇ ಅರ್ಥ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next