Advertisement

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

11:53 PM May 15, 2024 | Team Udayavani |

ಸುಬ್ರಹ್ಮಣ್ಯ/ ಅರಂತೋಡು: ಸುಬ್ರಹ್ಮಣ್ಯ ಸಮೀಪದ ದೇವರ ಗದ್ದೆಯಲ್ಲಿ ಬುಧವಾರ ಸಂಜೆ ಮರ ಬಿದ್ದು 7 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಪುಷ್ಪಗಿರಿ ವನ್ಯಜೀವಿ ಸಂರಕ್ಷಣ ವ್ಯಾಪ್ತಿಯ ಚೆಕ್‌ ಪಾಯಿಂಟ್‌ ಗೆ ಮರ ಬಿದ್ದುಹಾನಿಗೀಡಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಗ್ರಾ.ಪಂ. ಸದಸ್ಯ ಹರೀಶ್‌ ಇಂಜಾಡಿ ಭೇಟಿ ನೀಡಿದ್ದಾರೆ.

Advertisement

ಸುಬ್ರಹ್ಮಣ್ಯದ ಕುಲ್ಕುಂದ-ಬಿಸ್ಲೆ ಘಾಟಿ ರಸ್ತೆಯ ಕೆಲವೆಡೆ ಮರ ಬಿದ್ದು ರಸ್ತೆ ಬಂದ್‌ ಆಯಿತು. ಸುಬ್ರಹ್ಮಣ್ಯದ ಇಂಜಾಡಿ ಬಳಿ 3 ದಿನಗಳ ಹಿಂದೆ ಬಿದ್ದ ಮರ ಅರ್ಧ ರಸ್ತೆಯಲ್ಲಿ ಇನ್ನೂ ಇದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಾ.ಹೆ.ಗೆ ಬಿದ್ದ ಮರ: ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಮತ್ತು ಚವುಕಿಯಲ್ಲಿ ಬುಧವಾರ ರಾತ್ರಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯರು ಮರಗಳನ್ನು ತೆರವುಗೊಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next