Advertisement

ಔರಂಗಜೇಬ್‌ ಗೋರಿ ತೆರವಿಗೆ ಪ್ರಧಾನಿಗೆ ಪತ್ರ

07:46 PM Mar 06, 2023 | Team Udayavani |

ಔರಂಗಬಾದ್‌: ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಮೊಘಲ್‌ ಸುಲ್ತಾನ ಔರಂಗಜೇಬ್‌ನ ಗೋರಿಯನ್ನು ತೆರವು ಮಾಡಬೇಕೆಂದು ಶಿವಸೇನಾ ಶಾಸಕ ಸಂಜಯ್‌ ಶಿರ್ಸತ್‌ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಪ್ರಧಾನಿಗೆ ಮೋದಿಯವರಿಗೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ. ಜತೆಗೆ ಈ ನಿಟ್ಟಿನಲ್ಲಿ ಸಿಎಂ ಏಕನಾಥ ಶಿಂಧೆ ಬಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಔರಂಗಬಾದ್‌ನ ಹೆಸರನ್ನು ಛತ್ರಪತಿ ಸಾಂಭಾಜಿನಗರವೆಂದು ಬದಲಾಯಿಸುವುದರ ವಿರುದ್ಧ; ಎಐಎಂಐಎಂ ಸಂಸದ ಇಮ್ತಿಯಾಜ್‌ ಜಲೀಲ್‌ ಮಾಡಿರುವ ಪ್ರತಿಭಟನೆಯನ್ನು ಬಿರಿಯಾನಿ ಪಾರ್ಟಿ ಎಂದು ಲೇವಡಿ ಮಾಡಿದ್ದಾರೆ. ಹೆಸರು ಬದಲಾವಣೆಯಿಂದ ನಿಮಗೆ ಆಗುವ ತೊಂದರೆಯೇನೆಂದು ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next