Advertisement

Belagavi; ಮತ್ತೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಮತ್ತೆ ಸ್ಪಷ್ಟನೆ ನೀಡಿದ ಸವದಿ

12:53 PM Feb 06, 2024 | Team Udayavani |

ಬೆಳಗಾವಿ: ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಹೋಗುವದಿಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

Advertisement

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಸವದಿ ಸ್ಪಷ್ಟನೆ ನೀಡಿದರು.

ನಾನು ಬಿಜೆಪಿ ಸೇರ್ಪಡೆಯಾಗಿ ಬೀದರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ವರದಿಗಳು ಬರುತ್ತಿರುವದು ನನಗೆ ಅಚ್ಚರಿ ಮೂಡಿಸಿದೆ. ಇದೆಲ್ಲಾ ಸುಳ್ಳು. ಊಹಾಪೋಹ. ಕಪೋಲಕಲ್ಪಿತ ಎಂದರು.

ಅಥಣಿ ಕ್ಷೇತ್ರದ ಜನರು ನನಗೆ ಶಾಸಕನಾಗಿ ಇರುವಂತೆ ಆಶೀರ್ವಾದ ಮಾಡಿದ್ದಾರೆ. ನಾನು ಶಾಸಕನಾಗಿಯೇ ಮುಂದುವರಿಯುವೆ ಎಂದು ಸವದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next