Advertisement

ಕೋವಿಡ್ ಆತಂಕ; ಸರಣಿ ವಿಳಂಬ?

10:06 PM Feb 03, 2022 | Team Udayavani |

ಹೊಸದಿಲ್ಲಿ: ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಕ್ರಿಕೆಟ್‌ ಸರಣಿ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗಲೇ ಟೀಮ್‌ ಇಂಡಿಯಾದಲ್ಲಿ ಕೊರೊನಾ ಆತಂಕ ಮನೆಮಾಡಿದೆ. ಇದರಿಂದ ಸರಣಿ ವಿಳಂಬಗೊಳ್ಳುವ ಸಾಧ್ಯತೆ ಗೋಚರಿಸಿದೆ.

Advertisement

ಈಗಾಗಲೇ ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಋತುರಾಜ್‌ ಗಾಯಕ್ವಾಡ್‌, ನವದೀಪ್‌ ಸೈನಿ ಹಾಗೂ ಅನೇಕ ಸಿಬಂದಿಗೆ ಕೋವಿಡ್‌ ದೃಢಪಟ್ಟಿದೆ.

ಇದೀಗ ಮತ್ತೂಬ್ಬ ಆಟಗಾರ ಅಕ್ಷರ್‌ ಪಟೇಲ್‌ ಅವರಿಗೂ ಕೊರೊನಾ ಪಾಸಿಟಿವ್‌ ಅಂಟಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಅಕ್ಷರ್‌ ಪಟೇಲ್‌ ವಿಂಡೀಸ್‌ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಮನೆಯಲ್ಲೇ ಇದ್ದಾರೆ.

ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಪ್ರಮುಖ ಆಟಗಾರರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬರುತ್ತಿರುವುದರಿಂದ ಭಾರತದ ಅಭ್ಯಾಸವನ್ನು ಸ್ಥಗಿತಗೊಳಿಸಲಾಗಿದೆ.

ಇನ್ನೆರಡು ಸುತ್ತಿನ ಪರೀಕ್ಷೆ:

Advertisement

ಈ ಬೆಳವಣಿಗೆ ಬೆನ್ನಲ್ಲೇ ಭಾರತ-ವೆಸ್ಟ್‌ ಇಂಡೀಸ್‌ ಏಕದಿನ ಸರಣಿ ನಿಗದಿತ ದಿನಾಂಕದಂದು ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಬಿಸಿಸಿಐ ಗುರುವಾರ ಮತ್ತು ಶುಕ್ರವಾರ ಮತ್ತೂಂದು ಸುತ್ತಿನ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ವೇಳೆ ತಂಡದಲ್ಲಿ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಅಧಿಕವಾದರೆ ಸರಣಿ ಆರಂಭವನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಬಹುದು. ವೇಳಾಪಟ್ಟಿಯಂತೆ ರವಿವಾರ ಮೊದಲ ಪಂದ್ಯ ನಡೆಯಬೇಕಿದೆ.

ಮಾಯಾಂಕ್‌ಗೆ ಅವಕಾಶ:

ಆರಂಭಿಕ ಆಟಗಾರರಾದ ಧವನ್‌ ಮತ್ತು ಗಾಯಕ್ವಾಡ್‌ ಕ್ವಾರಂಟೈನ್‌ನಲ್ಲಿ ಇರುವುದರಿಂದ ಹಾಗೂ ಮೊದಲ ಏಕದಿನ ಪಂದ್ಯಕ್ಕೆ ಕೆ.ಎಲ್‌. ರಾಹುಲ್‌ ವಿಶ್ರಾಂತಿ ಪಡೆದಿರುವುದರಿಂದ ಮಾಯಾಂಕ್‌ ಅಗರ್ವಾಲ್‌ಗೆ ಬಾಗಿಲು ತೆರೆದಿದೆ. ಅವರನ್ನು ಏಕದಿನ ಸರಣಿಗಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next