Advertisement

2022: ಸ್ನೇಹ ವರ್ಷ: ಆಸಿಯಾನ್‌ ಬಾಂಧವ್ಯ ಹಿನ್ನೆಲೆಯಲ್ಲಿ ಮೋದಿ ಘೋಷಣೆ

08:28 AM Oct 29, 2021 | Team Udayavani |

ಹೊಸದಿಲ್ಲಿ: “ಆಸಿಯಾನ್‌ ಒಕ್ಕೂಟದ ಏಕತೆ ಹಾಗೂ ಕೇಂದ್ರೀಯತೆ ಭಾತರದ ಪಾಲಿಗೆ ಎಂದಿಗೂ ಪ್ರಮುಖವಾದ ವಿಚಾರವಾಗಿದೆ. ಈ ವರ್ಷ ಭಾರತ, ತನ್ನ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಿದೆ. ಮುಂದಿನ ವರ್ಷ ಆಸಿಯಾನ್‌ ಹಾಗೂ ಭಾರತ ನಡುವಿನ ಸ್ನೇಹ ಶುರುವಾಗಿ 30 ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ 2022ನೇ ವರ್ಷವನ್ನು ಆಸಿಯಾನ್‌-ಭಾರತ ಸ್ನೇಹ ವರ್ಷ ವೆಂದು ಆಚರಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಗುರುವಾರದಂದು ಆರಂಭವಾದ ಆಸಿಯಾನ್‌ ಶೃಂಗಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಿ ಮಾತನಾಡಿದ ಮೋದಿ, ಇಂಡೋ ಪೆಸಿಫಿಕ್‌ ಪ್ರಾಂತ್ಯದಲ್ಲಿರುವ ರಾಷ್ಟ್ರಗಳ ಸಾರ್ವ ಭೌಮತೆಯನ್ನು ಕಾಪಾಡಲು ಆಸಿಯಾನ್‌ ಒಕ್ಕೂಟ ಹೊಂದಿರುವ ಆಶಯಗಳಿಗೆ ಭಾರತ ಬದ್ಧವಾಗಿದೆ. ಅದಕ್ಕನುಗುಣವಾಗಿ, ಇಂಡೋ ಪೆಸಿಫಿಕ್‌ ಓಶಿಯನ್ಸ್‌ ಇನಿಶಿಯೇಟಿವ್ಸ್‌ (ಐಪಿಒಐ) ಹಾಗೂ ಆಸಿಯಾನ್‌ನ ಔಟ್‌ಲುಕ್‌ ಫಾರ್‌ದ ಇಂಡೋ-ಪೆಸಿಫಿಕ್‌ ಮಾರ್ಗ ಸೂಚಿಗಳನ್ನು ಗೌರವಿಸುವುದರೊಂದಿಗೆ ಅವುಗಳ ಅನುಷ್ಠಾನಕ್ಕೆ ಗುರುತರ ಸಹಕಾರ ನೀಡಲಿದೆ ಎಂದು ತಿಳಿಸಿದರು.

“ಆಸಿಯಾನ್‌ ರಾಷ್ಟ್ರಗಳೊಂದಿಗೆ ಭಾರತದ ಅನುಬಂಧ ಸಹಸ್ರ ವರ್ಷಗಳಷ್ಟು ಹಳೆಯದ್ದು. ಭಾರತ ಮತ್ತು ಈ ರಾಷ್ಟ್ರಗಳ ಮೌಲ್ಯಗಳು, ಸಂಸ್ಕೃತಿ, ಆಹಾರ ಹಾಗೂ ಇನ್ನಿತರ ಹಲವಾರು ವಿಚಾರ ಗಳಲ್ಲಿರುವ ಸಾಮ್ಯತೆಯೇ ಇದನ್ನು ಸಾರಿ ಹೇಳುತ್ತದೆ. ಇಂಥ ಅನುಬಂಧವಿರುವ ರಾಷ್ಟ್ರಗಳ ನಡುವೆ ಇಂದು ಹಿಂದೆಂದಿಗಿಂತ ಹೆಚ್ಚಿನ ಸಹಕಾರದ ಅಗತ್ಯವಿದೆ. ನಾವೆಲ್ಲರೂ ಇಂದು ಕೊರೊನೋತ್ತರ ಸಂಕಷ್ಟ ದಲ್ಲಿದ್ದೇವೆ. ಹಾಗಾಗಿ ನಾವೆಲ್ಲರೂ ಪರಸ್ಪರ ಸಹಕಾರ, ಕರುಣೆಯೊಂದಿಗೆ ಸಶಕ್ತರಾಗಲು ಪ್ರಯತ್ನಿಸಬೇಕಿದೆ’ ಎಂದು ಮೋದಿ ಆಶಿಸಿದರು. ಜತೆಗೆ “ಭಾರತದ “ಆ್ಯಕ್ಟ್ ಈಸ್ಟ್‌ ಪಾಲಿಸಿ’ ಹಾಗೂ “ಸೆಕ್ಯುರಿಟಿ ಆ್ಯಂಡ್‌ ಗ್ರೋತ್‌ ಫಾರ್‌ ಆಲ್‌ ಇನ್‌ ದ ರೀಜನ್‌’ (ಎಸ್‌ಎಜಿಎಆರ್‌) ವಿಚಾರಗಳಿಗೆ ಆಸಿಯಾನ್‌ ರಾಷ್ಟ್ರಗಳು ಸಹಕಾರ ನೀಡಬೇಕು’ ಎಂದು ಕೋರಿದರು.

ಇದೇ ವೇಳೆ, 2021ರಲ್ಲಿ ಆಸಿಯಾನ್‌ನ ಅಧ್ಯಕ್ಷ ಸ್ಥಾನ ವಹಿಸಿರುವ ಬ್ರುನೆಯ್‌ನ ಮಹಾರಾಜರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

ನಾಲ್ಕು ದಿನಗಳ ಪಿಎಂ  ವಿದೇಶ ಪ್ರವಾಸ ಶುರು :

Advertisement

ಪ್ರಧಾನಿ ಮೋದಿಯವರ ನಾಲ್ಕು ದಿನಗಳ ವಿದೇಶ ಪ್ರವಾಸ ಶುಕ್ರವಾರದಿಂದ ಆರಂಭವಾಗಲಿದೆ. ಅ.29ರಿಂದ ಅ.31ರ ವರೆಗೆ ಇಟಲಿಯ ರೋಮ್‌ ನಲ್ಲಿ  ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ನ.1, 2ರಂದು

ಯು.ಕೆ.ಯ ಗ್ಲಾಸ್ಗೊದಲ್ಲಿ ನಡೆಯಲಿರುವ ಹವಾಮಾನ ಶೃಂಗದಲ್ಲೂ ಭಾಗವಹಿಸಲಿದ್ದಾರೆ. ಈ ಕುರಿತಂತೆ ಗುರುವಾರ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ರೋಮ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಕೊರೊನೋತ್ತರ ಜಗತ್ತಿನಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಸಾಧಿಸಬೇಕಿರುವ ಆರ್ಥಿಕ ಚೇತರಿಕೆ ಬಗ್ಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಚರ್ಚಿಸುತ್ತೇನೆ. ಗ್ಲಾಸೊYàದಲ್ಲಿ  ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ನಡೆಯಲಿರುವ ಶೃಂಗಸಭೆಯಲ್ಲಿ ಅಂಥ ದುಷ್ಪರಿಣಾಮಗಳಿಂದ ಪಾರಾಗುವ ಬಗ್ಗೆ ಭಾರತ ಹೊಂದಿರುವ ನಿಲುವು ಹಾಗೂ ಅದಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಸಿಗ ಬೇಕಾದ ಸಹಕಾರಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.  ಇದೇ ಪ್ರವಾಸದ ವೇಳೆ, ಇಟಲಿಯ ಪ್ರಧಾನಿ ಮರಿಯೊ ಡ್ರಾ ಯವರ ಆಹ್ವಾನದ ಮೇರೆಗೆ ವ್ಯಾಟಿಕನ್‌ ಸಿಟಿಗೆ ಭೇಟಿ ನೀಡಲಿರು ವುದಾಗಿಯೂ ಪ್ರಧಾನಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next