Advertisement

ಕಾರ್ಯಕರ್ತರ ನೆರವಿನಿಂದ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ: ಹೆಚ್.ಡಿ ದೇವೇಗೌಡ

04:08 PM Nov 04, 2021 | Team Udayavani |

ಬೆಂಗಳೂರು: ಯಾವುದೇ ಪಕ್ಷವನ್ನು ಕಟ್ಟಬೇಕಾದರೆ ಆರ್ಥಿಕ ಶಕ್ತಿ ಬೇಕು. ಜೆಡಿಎಸ್ ಪ್ರಾದೇಶಿಕ ಪಕ್ಷ. ಇದನ್ನ ಉಳಿಸಬೇಕು, ಇದರ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರ ಜೊತೆ ಚರ್ಚಿಸಿ, ಪ್ರತಿ ಜಿಲ್ಲೆಯ ಕಾರ್ಯಕರ್ತರ ನೆರವಿನೊಂದಿಗೆ ರಾಜ್ಯದಂತ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದರು.

Advertisement

ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಅಲ್ಲಿ 38 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆ ಮತಗಳು ಯಾರಿಗೆ ಹೋಗಿದೆ? ಬಿಜೆಪಿಗೆ ಮತ ಹಾಕಿದರೆ? ನಮಗೆ ಮತ ಹಾಕಿಲ್ಲ ಅಂದರೆ ಕಾಂಗ್ರೆಸ್ ಗೆ ಹಾಕುತ್ತಾರೆ ಎಂದರು.

ಇದನ್ನೂ ಓದಿ:ಅಡುಗೆ ಅನಿಲ ಬೆಲೆ ಕೂಡಾ ಕಡಿಮೆ ಮಾಡಬೇಕು: ಡಿ ಕೆ ಶಿವಕುಮಾರ್

ಕಾಂಗ್ರೆಸ್ ಸೋಲಿಸಲು ಹೀಗೆ ಮಾಡಿದರು ಎಂದಿದ್ದರು, ಈ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಯಾವುದೇ ಉಪಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದೆ. ಆದರೂ ಸೋಲಾಗಿದೆ ಇದರ ಬಗ್ಗೆ ಪಕ್ಷದಲ್ಲಿ ಚರ್ಚಿಸಸುತ್ತೇವೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next