Advertisement

Wildlife ವನ್ಯ ಜೀವಿಗಳು/ಸೊತ್ತುಗಳ ಮೌಲ್ಯದ ನಿಗದಿಪಡಿಸಬಾರದು

12:59 AM Nov 08, 2023 | Team Udayavani |

ಬೆಂಗಳೂರು: ಇನ್ನು ಮುಂದೆ ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ವಶಪಡಿಸಿಕೊಳ್ಳುವ ಸೊತ್ತುಗಳ ಮೌಲ್ಯವನ್ನು ಬಹಿರಂಗಪಡಿಸದಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

Advertisement

ವನ್ಯ ಜೀವಿಗಳು ಅಥವಾ ಸೊತ್ತು¤ಗಳ ಕಳ್ಳ ದಾಸ್ತಾನು ಮಾಡಿರುವ, ಕಳ್ಳ ಸಾಗಾಣಿಕೆಯ ವಿರುದ್ಧ ಪೊಲೀಸರು ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅದೇ ವೇಳೆ ಅವರಿಂದ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯವನ್ನು ಬಹಿರಂಗಪಡಿಸುವುದರಿಂದ ಕಳ್ಳಸಾಗಾಣಿಕೆದಾರರಿಗೆ ಅವುಗಳ ಮೌಲ್ಯ ತಿಳಿಯುತ್ತದೆ. ಅದರಿಂದ ಅತೀ ಹೆಚ್ಚು ಮೌಲ್ಯ ಇರುವ ವನ್ಯಜೀವಿಗಳ ಹತ್ಯೆ, ಕಳ್ಳತನ, ಸಾಗಾಣಿಕೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಆದ್ದರಿಂದ ವನ್ಯಜೀವಿಗಳು ಅಥವಾ ಅವುಗಳ ವಸ್ತುಗಳ ಮೌಲ್ಯ ನಿಗದಿಪಡಿಸುವುದಾಗಲಿ, ಅದರ ಮಾರುಕಟ್ಟೆ ಮೌಲ್ಯ ನಮೂದಿಸಿ ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next