Advertisement

ಕಾಡು ಕುರಿ-ಕಾಡು ಹಂದಿ ಬೇಟೆ: ಮಾಂಸ ವಶ

03:37 PM Mar 31, 2022 | Team Udayavani |

ಬಾಳೆಹೊನ್ನೂರು: ಅರಣ್ಯ ಇಲಾಖೆ ವ್ಯಾಪ್ತಿಯ ದೇವದಾನ ಗ್ರಾಮದ ಕುಂಬರಗೋಡಿನಲ್ಲಿ ಕಾಡು ಕುರಿ ಹಾಗೂ ಕಾಡು ಹಂದಿ ಬೇಟೆ ಆಡಿ ಅಡುಗೆಗೆ ಸಿದ್ಧಪಡಿಸಿದ್ದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿ ನಿರಂಜನ್‌ ತಿಳಿಸಿದ್ದಾರೆ.

Advertisement

ಕೃತ್ಯಕ್ಕೆ ಬಳಸಿದ ನಾಡ ಬಂದೂಕು ಒಂದು ದ್ವಿಚಕ್ರ ವಾಹನ 8 ಕೆ.ಜಿ ಮಾಂಸ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಕುಂಬರಗೋಡಿನ ಫ್ರಾನ್ಸಿಸ್‌ ಹಾಗೂ ಹಂಗರವಳ್ಳಿಯ ಸುನಿಲ್‌ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಕೊಪ್ಪ ವಿಭಾಗದ ಡಿಎಫ್‌ಒ ನೀಲೇಶ್‌ ಶಿಂಧೆ ಎಸ್‌ಸಿಎಫ್‌ ಚೇತನ್‌ ಗಸ್ತಿ, ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್‌, ಕಿಶೋರ್‌, ಅರಣ್ಯ ರಕ್ಷಕರಾದ ಕಾರ್ತಿಕ್‌, ಹನುಮಂತ ಲೋನಿ, ಯೋಗಾನಂದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next