Advertisement

Puttur: ಕಾಡುಹಂದಿ ದಾಳಿ; ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ

08:05 PM Aug 20, 2024 | Team Udayavani |

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಸ್ಕೂಟರ್‌ ಸವಾರ ಕುಂಬ್ರ ಪೆಟ್ರೋಲ್‌ ಬಂಕ್‌ನ ಮ್ಯಾನೇಜರ್‌ ಆಗಿರುವ ಧನುಷ್‌ ಗಾಯಗೊಂಡಿದ್ದಾರೆ.

Advertisement

ಧನುಷ್‌ ಎಂದಿನಂತೆ ಬೆಳಗ್ಗೆ ಸ್ಕೂಟರ್‌ನಲ್ಲಿ ಕಚೇರಿಗೆ ಬರುತ್ತಿದ್ದ ವೇಳೆ ಏಕಾಏಕಿ ಕಾಡು ಹಂದಿ ದಾಳಿ ನಡೆಸಿತು. ನಿಯಂತ್ರಣ ತಪ್ಪಿ ಬಿದ್ದ ಅವರ ಮೇಲೆ ಎರಗಿ ಗಾಯಗೊಳಿಸಿತು. ದೇಹದ ವಿವಿಧೆಡೆ ಗಾಯಗಳಾಗಿವೆ. ಅವರ ಬಲ ಕೈಗೆ ತಿವಿದ ಕಾರಣ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next