Advertisement

ಮನಗೂಳಿ ಮುತ್ಯಾ ಉತ್ತರಾಧಿಕಾರಿ ಯಾರು?

12:45 PM Feb 06, 2021 | Team Udayavani |

ವಿಜಯಪುರ: ಪ್ರಸಕ್ತ ವರ್ಷದಲ್ಲಿ ಹಾಲಿ ವಿಧಾನಸಭೆ ಅವಧಿಯಲ್ಲಿ ಜಿಲ್ಲೆಯ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಲಿದೆ. ಈಚೆಗೆ ನಿಧನರಾದ ಸಿಂದಗಿ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ಸಿ. ಮನಗೂಳಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಉತ್ತರಾಧಿ ಕಾರಿ ಯಾರು ಎಂಬ ಚರ್ಚೆ ಆರಂಭಗೊಂಡಿದೆ.
ಜ.28ರಂದು ನಿಧರಾಗಿರುವ ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಸ್ಥಾನಕ್ಕೆ ಉಪ ಚುನಾವಣೆ ಎದುರಾಗಲಿದೆ. ಹೀಗಾಗಿ ಸಹಜವಾಗಿ ಕ್ಷೇತ್ರದಲ್ಲಿಮುತ್ಯಾನ ಉತ್ತರಾ ಧಿಕಾರಿ ಯಾರು  ಎಂಬ ಚರ್ಚೆ ಏರ್ಪಟ್ಟಿದೆ. ಆದರೆ ಯಾರೂ ಮುಕ್ತವಾಗಿ ಚರ್ಚೆಗೆ ಸಿದ್ಧರಾಗಿಲ್ಲ. ಎಂ.ಸಿ.ಮನೂಳಿ ಅವರ ಕುಟುಂಬದಲ್ಲಿ ಸದ್ಯ ಸೂತಕದ ಛಾಯೆ ಇರುವುದರಿಂದ ಕುಟುಂಬದಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿಲ್ಲ.

Advertisement

13 ದಿನಗಳ ದೈವಿ ಕಾರ್ಯ ಮುಗಿಸಿದ ಬಳಿಕ ಮನಗೂಳಿ ಅವರ ಕುಟುಂಬದಲ್ಲಿ ಉತ್ತರಾ ಧಿಕಾರಿ ಯಾರು ಎಂಬ ಚರ್ಚೆ ಆರಂಭಗೊಳ್ಳುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಮನಗೂಳಿ ಅವರ ಪುತ್ರರಾದ ಅಶೋಕ ಹಾಗೂ ಡಾ| ಶಾಂತವೀರ ಅವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟ ಕಾರಣ  ಜೆಡಿಎಸ್‌ ವರಿಷ್ಠರು ವೃದ್ಧಾಪ್ಯದಲ್ಲೂ ಎಂ.ಸಿ. ಮನಗೂಳಿ ಅವರನ್ನೇ ಸ್ಪರ್ಧೆಗೆ ಇಳಿಸಿದ್ದರು. ಇದು ನನ್ನ ಅಂತಿಮ ಚುನಾವಣೆ ಎಂದು ಪ್ರಚಾರ ಸಭೆಯಲ್ಲಿ ಆಡಿದ ಭಾವನಾತ್ಮಕ ಮಾತುಗಳು ಎಂ.ಸಿ.ಮನಗೂಳಿ ಅವರನ್ನು 80 ಇಳಿವಯಸ್ಸಲ್ಲೂ  ಗೆಲ್ಲಿಸಿದ್ದವು.

ಇದೀಗ ಅವರ ಅಗಲಿಕೆಯ ಹಂತದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಅನುಕಂಪದ ಅಲೆಯ ಲಾಭ ಪಡೆಯಲು ಈ   ಯಾರಿಗೆ ಟಿಕೆಟ್‌ ಸಿಗಲಿದೆ ಎಂಬ ಅಂಶ ಇನ್ನಷ್ಟೇ ಹೊರ ಬೀಳಬೇಕಿದೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ. ಮಾಜಿ ಶಾಸಕ ಶರಣಪ್ಪ ಸುಣಗಾರ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿಮಲ್ಲಣ್ಣ ಸಾಲಿ, ಕಾಂಗ್ರೆಸ್‌ ಟಿಕೆಟ್‌ ವಂಚಿತೆ  ಮಂಜುಳಾ ಸೇರಿ ಹಲವರು ಉಪ ಚುನಾವಣೆಯ ಟಿಕೆಟ್‌ ಆಕಾಂಕ್ಷಿಗಳು.

ಸಂಯುಕ್ತಾ ಪಾಟೀಲ್‌ ಕಸರತ್ತು: ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಈಚೆಗಷ್ಟೇ ಆಯ್ಕೆಯಾಗಿರುವ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಅವರ ಹೆಸರೂ ಕೇಳಿ ಬರುತ್ತಿದೆ. ಹೀಗಾಗಿ ಸ್ಪರ್ಧೆಯ ನಿರೀಕ್ಷೆಯಿಂದ ಟಿಕೆಟ್‌ ಪಡೆಯಲು ಈಗಿನಿಂದಲೇ ತಮ್ಮ ತಮ್ಮ ಗಾಡ್‌ಫಾದರ್‌ ಗಳ ಮೂಲಕ ಲಾಬಿ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದೂ ಸೋಲು ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮತ್ತೂಮ್ಮೆ ಸ್ಪರ್ಧೆಗೆ ಟಿಕೆಟ್‌ ಪಡೆಯಲುಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈ  ಹಿಂದೆ ಎರಡು ಬಾರಿ ಗೆದ್ದಾಗ ಮೊದಲ ಬಾರಿ ಪಕ್ಷ ಅ ಧಿಕಾರದಲ್ಲಿದ್ದು, ಎರಡನೇ ಅವ ಧಿಯಲ್ಲಿ ಗೆದ್ದಾಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹ್ಯಾಟ್ರಿಕ್‌ ಗೆಲುವು ನಿರೀಕ್ಷೆ ಹುಸಿಯಾದರೂ ಇದೀಗ ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದಿದೆ. ಹೀಗಾಗಿ ಟಿಕೆಟ್‌ ಪಡೆದು ಸ್ಪರ್ಧೆಗೆ ಇಳಿದಲ್ಲಿ ಆಡಳಿತ ಪಕ್ಷದ ಪ್ರಭಾವದಲ್ಲಿ ಗೆಲುವು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:ಹಾಲು ಉತ್ಪನ್ನ ರಫ್ತಿಗೆ ಗ್ರೀನ್‌ ಸಿಗ್ನಲ್

Advertisement

ಭೂಸನೂರು, ಶಾಬಾದಿ ಪೈಪೋಟಿ: ಭೂಸನೂರ ಅವರ ಹೊರತಾಗಿಯೂ ಬಿಜೆಪಿಯಲ್ಲಿ ಮುತ್ತು ಶಾಬಾದಿ ಅವರಿಗೆ ಟಿಕೆಟ್‌ ಪಡೆಯಲು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದರ ಮಧ್ಯೆ ಬಿಜೆಪಿ ಮೇಲ್ಮನೆ ಶಾಸಕರಾದ ಹನುಮಂತ ನಿರಾಣಿ ಹಾಗೂ ಅರುಣ ಶಹಾಪುರ ಅವರು ಸಾಂತ್ವನ ಹೇಳುವ ನೆಪದಲ್ಲಿ ಮನಗೂಳಿ ಅವರ ಮನೆಗೆ ಎರಡು ದಿನಗಳ ಹಿಂದೆ ನೀಡಿದ ಭೇಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಒಂದೊಮ್ಮೆ ಮನಗೂಳಿ ಕುಟುಂಬದಲ್ಲಿ ಜೆಡಿಎಸ್‌ ಟಿಕೆಟ್‌ ಪಡೆಯುವಲ್ಲಿ ಪೈಪೋಟಿ ಏರ್ಪಟ್ಟಲ್ಲಿ ಅದರ ಲಾಭ ಪಡೆಯಲು ಬಿಜೆಪಿ ನಾಯಕರು ಕಾಯುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಸದಸ್ಯ ಬಲದ ಶಕ್ತಿ ಪಡೆಯಲು ಸಿಂದಗಿ ಉಪ ಚುನಾವಣೆ ಸಹಾಯಕ್ಕೆ ಬರಲಿದೆ. ಕ್ಷೇತ್ರವನ್ನು ಮರಳಿ ವಶಕ್ಕೆ ಪಡೆಯಲು ಮನಗೂಳಿ ಕುಟುಂಬದ ರಾಜಕೀಯ ಪೈಪೋಟಿ ಬಿಜೆಪಿ ರಾಜಕೀಯ ಅಸ್ತ್ರವಾಗಿಸಿಕೊಂಡರೂ ಅಚ್ಚರಿ ಇಲ್ಲ ಎಂಬ  ಮಾತುಗಳೂ ಕೇಳಿ ಬರುತ್ತಿವೆ. ಇಂಥ ಬೆಳವಣಿಗೆ ಕಂಡು ಬಂದಲ್ಲಿ ಭೂಸನೂರ ಅವರನ್ನು ಕೈ ಹಿಡಿದು ಮನೆಗೆ ಸ್ವಾಗತಿಸಲು ಕಾಂಗ್ರೆಸ್‌ ಕೂಡ ಗುಪ್ತ ಚಿಂತನೆಯಲ್ಲಿದೆ ಎಂಬ ಮಾತಿದೆ.ಏಕೆಂದರೆ ಭೂಸನೂರ ಹಾಗೂ ಅವರ ಪತ್ನಿ ಸ್ಥಳೀಯ ಗ್ರಾಮೀಣ ಸಂಸ್ಥೆ ಹಿನ್ನೆಲೆಯಿಂದಲೇ ರಾಜಕೀಯ ಪ್ರವೇಶ ಮಾಡಿದ್ದರು. ಕಾರಣ ಇಂತ ಒಂದು ರಾಜಕೀಯ ಲೆಕ್ಕಾಚಾರದ ಚರ್ಚೆಯೂನಡೆದಿದೆ. ಹೀಗಾಗಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಎಂ.ಸಿ. ಮನಗೂಳಿ ಅವರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಇನ್ನು ಜೋರು ಪಡೆಯಲಿದೆ ಎಂಬುದಂತೂ ಸತ್ಯ.

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next