Advertisement

ಅಭಿವೃದ್ಧಿ ಯಾವಾಗ? ಪಿಎಂಗೆ ಟೆಕಿ ಪ್ರಶ್ನೆ

12:13 AM Apr 01, 2019 | Team Udayavani |

ಬೆಂಗಳೂರು: ಪ್ರಧಾನಿ ಮೋದಿಯವರು ಭಾನುವಾರ ನಡೆಸಿದ “ನಾನೂ ಚೌಕಿದಾರ್‌ ‘ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಟಿ ಉದ್ಯಮಿ ರಾಕೇಶ್‌ ಪ್ರಸಾದ್‌ ದೇಶದ ಅಭಿವೃದ್ಧಿ ಸಂಬಂಧಿಸಿದ ಪ್ರಶ್ನೆ ಕೇಳಿ ಎಲ್ಲರ ಮೆಚ್ಚುಗೆ ಪಡೆದರು. ಅನೇಕ ವರ್ಷದಿಂದ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಎಂದು ಕೇಳಿಕೊಂಡು ಬರುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಯಾವಾಗ ಆಗುತ್ತೆ ಎಂದು ಪ್ರಧಾನಿ ಮೋದಿಯವರಿಗೆ ನಾನೂ ಚೌಕಿದಾರ್‌ ಕಾರ್ಯಕ್ರಮ ದಲ್ಲಿ ಬೆಂಗಳೂರಿನ ರಾಕೇಶ್‌ ಪ್ರಸಾದ್‌ ಕೇಳಿದರು.

Advertisement

ಇದಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ, ನೀವು ತುಂಬ ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ಈ ಪ್ರಶ್ನೆ ದೇಶದ ಎಲ್ಲರ ಮನಸ್ಸಿನಲ್ಲೂ ಇದೆ. ಭಾರತ ಅಭಿವೃದ್ಧಿ ಹೊಂದಿ ದೇಶವಾಗಲು ಇಚ್ಛಾ ಶಕ್ತಿ ಮತ್ತು ಅದನ್ನು ಮಾಡಲು
ಹೊರಟಿರುವ ವ್ಯಕ್ತಿಯ ಮೇಲೆ ವಿಶ್ವಾಸ ಇಡಬೇಕಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ಭಾರತಕ್ಕೆ ಸೂಕ್ತ ನೇತೃತ್ವ ಸಿಕ್ಕಿದ್ದರೆ ಹೀಗೆ ಆಗುತ್ತಿರಲಿಲ್ಲ. ನಮ್ಮ ದೇಶದ ನಂತರ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ನಮಗಿಂತ ಅಭಿವೃದಿಟಛಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿವೆ. 5 ವರ್ಷದಲ್ಲಿ  ರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯಲು ಪ್ರಯತ್ನ ನಡೆಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next