Advertisement

ವ್ಹೀಲ್‌ ಚೇರ್‌ನಲ್ಲಿ ಬಂದ ಮೂವರು ಶಾಸಕರು

03:35 AM Jul 18, 2017 | Team Udayavani |

ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್‌ನ ಬೇಲೂರು ಶಾಸಕ ರುದ್ರೇಶ್‌ ಗೌಡ ಅವರು ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಉನ್ನತ ಶಿಕ್ಷಣ ಸಚಿವ ಬಸವರಾಜ್‌ ರಾಯರೆಡ್ಡಿ ಮನೆಯಲ್ಲಿ ಕಾಲುಜಾರಿ ಬಿದ್ದ ಪರಿಣಾಮ ಬಲಗಾಲಿನ ಮೊಣಕಾಲು ಮೂಳೆ ಮುರಿದ ಪರಿಣಾಮ ನಡೆಯಲು ಆಗದ ಕಾರಣ ವ್ಹೀಲ್‌ ಚೇರ್‌ನಲ್ಲಿ ಆಗಮಿಸಿ ಮತ ಚಲಾಯಿಸಿದರು. ಕಾಲಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಯಿಂದಲೇ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಿದರು.

Advertisement


ಅದೇ ಸಮಯಕ್ಕೆ ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಸಚಿವ ಹಾಗೂ ಮಂಡ್ಯ ಶಾಸಕ ಅಂಬರೀಶ್‌ ಬಸವರಾಜ್‌ ರಾಯರೆಡ್ಡಿ ಅವರಂತೆ ತಮ್ಮನ್ನೂ ವ್ಹೀಲ್‌ ಚೇರ್‌ನಲ್ಲಿ ಕರೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬಂದಿಗೆ ಸೂಚಿಸಿ, ವಿಧಾನಸೌಧದಲ್ಲಿ ವ್ಹೀಲ್‌ ಚೇರ್‌ ಮೂಲಕ ಆಗಮಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದರು. ಮತ ಕೇಂದ್ರದವರೆಗೂ ವ್ಹೀಲ್‌ ಚೇರ್‌ನಲ್ಲಿಯೇ ಕುಳಿತು ತೆರಳಿದ ಅಂಬರೀಶ್‌ ಮತದಾನ ನಡೆಯುವ ಕೊಠಡಿಯಲ್ಲಿ ನಡೆದುಕೊಂಡು ಹೋಗಿ ಮತ ಚಲಾಯಿಸಿ, ತಮಗೆ ಯಾವುದೇ ಆರೋಗ್ಯದ ಸಮಸ್ಯೆಯಿಲ್ಲ. ನಾನ್ಯಾಕ್‌ ವ್ಹೀಲ್‌ಚೇರಲ್ಲಿ ಬರಬಾರದು ಎಂದು ಬಂದಿದ್ದೇನೆ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next