Advertisement

ವದಂತಿಗೆ ಮತ್ತೆರಡು ಬಲಿ

06:00 AM Jun 14, 2018 | Team Udayavani |

ಔರಾಂಗಾಬಾದ್‌: ದರೋಡೆಕೋರರು ಎಂಬ ಶಂಕೆಯ ಮೇಲೆ ಮಹಾರಾಷ್ಟ್ರದ ಔರಾಂಗಾಬಾದ್‌ ಜಿಲ್ಲೆಯ ಚಂದಾಗಾಂವ್‌ ಗ್ರಾಮದಲ್ಲಿ ಇಬ್ಬರನ್ನು ಗ್ರಾಮಸ್ಥರೇ ಹೊಡೆದು ಕೊಂದಿದ್ದಾರೆ. ಕಳೆದ ಶುಕ್ರವಾರವೇ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ವಾಟ್ಸ್‌ ಆ್ಯಪ್‌ನ ಸುಳ್ಳು ಸಂದೇಶಗಳನ್ನು ನಂಬಿದ್ದ ಈ ಗ್ರಾಮಸ್ಥರು ಹೊಲವೊಂದರಲ್ಲಿ ಇದ್ದ ಒಂಬತ್ತು ಮಂದಿಯನ್ನು ಹಿಡಿದು ತಂದು ಹಲ್ಲೆ 
ಮಾಡಿದ್ದರು. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next