Advertisement

ಡಿಸಿಎಂ ನೇಮಕದಿಂದ ಕಾಂಗ್ರೆಸ್‌ಗೆ ಏನು ನಷ್ಟ?

11:38 PM Aug 31, 2019 | Lakshmi GovindaRaj |

ಶಿವಮೊಗ್ಗ: ಲಕ್ಷ್ಮಣ ಸವದಿ ಅಥವಾ ರಾಮ ಸವದಿಯನ್ನಾದರೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡ್ತೀವಿ. ಅದು ನಮ್ಮ ಪಕ್ಷದ ನಿರ್ಧಾರ. ಅದರಿಂದ ಕಾಂಗ್ರೆಸ್‌ಗೆ ಏನು ನಷ್ಟ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಡಿಸಿಎಂ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಏನು ತೊಂದರೆ ಎಂಬುದು ತಿಳಿಯುತ್ತಿಲ್ಲ ಎಂದರು.

Advertisement

“ಆಪರೇಷನ್‌ ಕಮಲ’ದ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಕಾಂಗ್ರೆಸ್‌ನವರು ಪ್ರಶ್ನಿಸುತ್ತಿದ್ದಾರೆ. ನಿನ್ನೆ ತನಕ ನೀವೇ ಸರ್ಕಾರದಲ್ಲಿ ಇದ್ದಿರಲ್ಲಾ. ಯಾಕೆ ಅದನ್ನು ಸಿಬಿಐ ತನಿಖೆಗೆ ಕೊಡಲಿಲ್ಲ. ತನಿಖೆ ಮಾಡಲಿಲ್ಲ ಎಂದರೇ ನಿಮಗೆ ಶಕ್ತಿ ಇರಲಿಲ್ಲವೇ…? “ಆಪರೇಷನ್‌ ಕಮಲ’ದ ಸಿಬಿಐ ತನಿಖೆ ಕುರಿತು ಮಾತನಾಡುವ ನೈತಿಕ ಶಕ್ತಿ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next