Advertisement

ಕಪ್ಪು-ಬಿಳುಪು ವ್ಯಕ್ತಿತ್ವಗಳಲ್ಲಿ ಗ್ರಹಗಳ ಪಾತ್ರ ಏನು ಗೊತ್ತೆ?

03:55 AM Jul 29, 2017 | |

ಬದುಕಿನ ಸಂದರ್ಭದಲ್ಲಿ, ಬದುಕಿನ ಇಡೀ ವ್ಯಕ್ತಿತ್ವದ ಚೌಕಟ್ಟು ಸಾತ್ವಿಕ ರಜೋ ಹಾಗೂ ತಮೋ ಗುಣಗಳ  ಮಿಶ್ರಣದ ತಳಹದಿಯ ಮೇಲಿಂದ ನಿರ್ಮಾಣ ಹೊಂದುತ್ತಿದೆ. ಸಾತ್ವಿಕ ಗುಣವೆಂದರೆ ಏನೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮೋ ಗುಣ ತಾಮಸ ವ್ಯಕ್ತಿತ್ವಕ್ಕೆ ಕಪ್ಪು ಕತ್ತಲ ಅಜಾnನ ಕ್ರೌರ್ಯಗಳ ಧಾತುಗಳು ಅಡಕಗೊಂಡಿರುತ್ತದೆ. ರಜೋಗುಣ ಸಾಮಾನ್ಯವಾಗಿ ಸಾತ್ವಿಕತೆ ಹಾಗೂ ತಾಮಸಗಳ ಮಿಶ್ರಣ ಎಂದೇ ಹೇಳಬಹುದು. ಒಂದು ಲೆಕ್ಕದಲ್ಲಿ ಈ ಗುಣಗಳು ಗ್ರಹಗಳಿಂದ ದತ್ತಗೊಂಡಿರುವಂಥದ್ದು. ಆದರೆ ಮನಸ್ಸು ಈ ಗುಣಗಳಿಂದ ಒಬ್ಬನನ್ನು ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಅಭೂತಪೂರ್ವ ಕಡಿವಾಣವೊಂದನ್ನು ಅಹಜವಾಗಿಯೇ ಒದಗಿಸುವ ಕೆಲಸವನ್ನು ಮಾಡಬಹುದು. ಅದು ನಿರಂತರವಾದದ್ದು. ಅಲ್ಲಿ ಒಬ್ಬ ವ್ಯಕ್ತಿಯು ಜೀವನದ ಸಂದರ್ಭದಲ್ಲಿ ಹುಟ್ಟಿನಿಂದಲೇ ಪಡೆದ ಸಂಸ್ಕಾರ. ತಾನು ಜೀವಿಸುತ್ತಿರುವ ಪರಿಸರ, ತಾನು ಸಂಧಿಸುವ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಮೇಲಿಂದ ತನ್ನ ಮನೆತನ ಹಿನ್ನೆಲೆಯ ಮೇಲಿಂದಲೂ ಒಳಗೊಳ್ಳುವ ಎಳೆಗಳ ಕಾರಣಕ್ಕಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಮಾನಶಾಸ್ತ್ರ ಈ ಎಲ್ಲಾ ನೆಲೆಗಳ ಮೇಲಿಂದ ಒಬ್ಬ ವ್ಯಕ್ತಿಯನ್ನು ವಿಶ್ಲೇಷಿಸುವ ದಾರಿಯನ್ನು ಹುಡುಕಿಕೊಳ್ಳುತ್ತದೆ.

Advertisement

ಒಬ್ಬನ ದುಷ್ಟತನ ಗುರುತಿಸುವುದು ಜಾತಕಗಳಿಂದ ಸಾಧ್ಯ

ಜನ್ಮ ಕುಂಡಲಿಗಳು ಒಬ್ಬ ವ್ಯಕ್ತಿಯ ದುಷ್ಟತನ ಒಟ್ಟೂ ಮೊತ್ತ ಇದೇ ಗಾತ್ರದಲ್ಲಿ ಅಡಕಗೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬಹುದು. ವ್ಯಕ್ತಿತ್ವದ ವರ್ಚಸ್ಸಿನ  ಭಾಗಗಳನ್ನು ಬಹು ಮುಖ್ಯವಾಗಿ ಒಬ್ಬ ವ್ಯಕ್ತಿಯ ಲಗ್ನಭಾವದಲ್ಲಿ ಪ್ರಧಾನವಾಗಿ ಕಂಡುಕೊಳ್ಳಬಹುದು. ಲಗ್ನಭಾವವು ಆ ವ್ಯಕ್ತಿಯ ಹುಟ್ಟಿದ ಕ್ಷಣದ ಘನಿಕೃತ ಬಿಂದು. ಇದನ್ನು ಆ ವ್ಯಕ್ತಿ ಹುಟ್ಟಿದ ದಿನಾಂಕ ಹಾಗೂ ವೇಳೆಯನ್ನು ಆಧರಿಸಿ ತಿಳಿದುಕೊಳ್ಳಬೇಕು. ಈ ಘನಿಕೃತ ಬಿಂದುವಿನ ಒಡೆಯನಾಗಿ ಒಂದು ನಿರ್ದಿಷ್ಟ ಗ್ರಹ ಕೆಲಸ ಮಾಡುತ್ತದೆ. ಗ್ರಹಗಳಲ್ಲಿ ಕ್ರೂರ ಗ್ರಹಗಳು, ಸೌಮ್ಯಗ್ರಹಗಳು ಎಂಬ ವಿಭಾಗೀಕರಣ ಇದೆ. ಗ್ರಹಗಳಲ್ಲಿ ನಿರಂತರವಾಗಿ ನಿಂತನೀರಾಗದೆ ಚಲಿಸುವ ಮನೋಭಾವವನ್ನು ಒದಗಿಸುವ ಧಾತುಗಳು ಒದಗಿದವಾದರೆ ವ್ಯಕ್ತಿಯ ಮನೋಗತದಲ್ಲಿ ಉಂಟಾಗುವ ಸ್ವಭಾವಗಳು ಪ್ರತ್ಯೇಕವಾಗಿರುತ್ತದೆ. ಸ್ಥಿರತೆಯನ್ನು ಅಥವಾ ಇಬ್ಬಂದಿತನಗಳನ್ನು ಒದಗಿಸುವ ಶಕ್ತಿಯನ್ನು ಗ್ರಹಗಳು ಪಡೆದವು ಎಂದಾದರೆ  ಸ್ವಭಾವಗಳು ಆ ನಿಟ್ಟಿನಲ್ಲಿ ತಮ್ಮ ಗುಣಧರ್ಮವನ್ನು ಪಡೆದಿರುತ್ತದೆ. ಒಬ್ಬ ದುಷ್ಟನ ನಿರ್ಮಾಣ ಕೇವಲ ಕ್ರೂರ ಗ್ರಹಗಳಾದ ಶನಿ, ಕುಜ, ಸೂರ್ಯ, ರಾಹು, ಕೇತು ಗಳ ಮೇಲಿಂದಲೇ ರೂಪ ಪಡೆಯಬೇಕಾಗಿಲ್ಲ. ಅಂತಾರಾಷ್ಟ್ರೀಯವಾಗಿ ತನ್ನ ಕುಕೃತ್ಯಗಳಿಂದ ಗಮನ ಸೆಳೆದ ಚಾಲ್ಸ್‌ ì ಶೋಭರಾಜ್‌ ವ್ಯಕ್ತಿತ್ವವನ್ನು ಋಣಾತ್ಮಕ ದಿಸೆಯತ್ತ ಮಾಡುವಲ್ಲಿ ಪ್ರಧಾನವಾದ ಪಾತ್ರವನ್ನು ಸೌಮ್ಯ ಗ್ರಹವಾದ ಬುಧನೇ ಪ್ರಧಾನವಾಗಿ ಪ್ರಾಪ್ತಿ ಮಾಡಿದ್ದಾನೆ. ಮನೋಹರವಾದ ರೂಪವನ್ನು ಬುದ್ಧಿಶಕ್ತಿಯನ್ನು ನವಿರಾಧ ಮಾತುಗಳಿಗಾಗಿ ವೈವಿಧ್ಯಮಯ ತಿಳುವಳಿಕೆಗಳ ಸಾಂದ್ರಸ್ನಿಗ್ಧ ಚೈತನ್ಯ, ಸಶಕ್ತಿ ಚಂದ್ರನ ಮೂಲಕವಾಗಿ ಒಂದು ಅನನ್ಯ ತಾಳ್ಮೆ ಇತ್ಯಾದಿಗಳನ್ನು ಶೋಭರಾಜ್‌ಗೆ ಒದಗಿಸಿದ್ದಾನೆ. ಶುಭ ಗ್ರಹವಾದ ಗುರು ಮಾತಿನ ಮಹಾಬಲತ್ವವನ್ನು ಒದಗಿಸಿದ್ದಾನೆ.  ಆದರೆ ಇಲ್ಲಿ ಮಾತು ಸ್ಪಷ್ಟವಾಗಿ ಖಡಕ್‌ ಆಗುವ ಉರಿನಾಲಿಗೆಯನ್ನು ರಾಹುವಿನ ಮೂಲಕ ಆದರೂ ತರ್ಕವೊಂದನ್ನು ಉರಿನಾಲಿಗೆಯಲ್ಲಿ ತುರುಕಿಕೊಳ್ಳುವ ಚಾಲಾಕಿತನವನ್ನು ಚಂದ್ರನಿಂದಲೂ ಶೋಭರಾಜ್‌ ಪಡೆದಿದ್ದಾನೆ. ಬಹು ದೊಡ್ಡದೇ ಆದ ಕೇಡಿತನವೊಂದು ಆಖೈರಾಗಿ ಅಡಕಗೊಂಡದ್ದು ಲಗ್ನಭಾವದ ಅಧಿಪತಿಯಾದ ಬುಧನಿಂದ.  ದುಷ್ಟನೂ ಕೆಡುಕಿಗೆ ಸಿಲುಕಿಸಿಯೇ ತೀರುವ ಅವಕಾಶವನ್ನು ಕಲ್ಪಿಸಲಿಕ್ಕೇ ಪಣ ತೊಟ್ಟಂತಿರುವ,  ಮಾರಕ, ಕ್ರೂರಿಯಾದ ಏಕಾದಶ ಸ್ಥಾನದ ಅಧಿಪತಿ ಕುಜನೊಂದಿಗೆ ಪರಿವರ್ತನಾ ಯೋಗ ಪಡೆದಿದ್ದು.  ಹೀಗಾಗಿ ಕ್ರಿಮಿನಲ್‌ ಸ್ವರೂಪಾಚ್ಛಾದಿತ  ಮನೋಸ್ಥಿತಿ ಹದಿ ಕಟ್ಟಿತ್ತು ಚಾರ್ಲ್ಸ್‌ಗೆ ಲೈಂಗಿಕ ವಿಚಾರವನ್ನು ಅವನ ಜಾತಕದಲ್ಲಿ ನಿಯಂತ್ರಿಸುವ ಗುರುಗ್ರಹ ರಾಹುಗ್ರಸ್ತವಾಗಿ  ಶನಿದೃಷ್ಟಿ ಪೀಡಿತನೂ ಆಗಿ ಅತಿಯಾದ ನಿಕೃಷ್ಟತೆಗೆ ಅವನನ್ನು ತಳ್ಳಿತ್ತು. ಸೆರೆಮನೆಯ ಯೋಗವನ್ನು ವಿಶ್ಲೇಷಿಸಬಹುದಾದ ಆರನೇ ಮನೆ ಶನಿಯ ದೃಷ್ಟಿಯಿಂದ ಭಾದೆಗೆ ಒಳಗಾಯ್ತು. ಲಾಭದ ಬುಧನಿಂದಾಗಿ ಗಲ್ಲುಶಿಕ್ಷೆಗೆ ಅವಕಾಶ ಒದಗಲಿಲ್ಲ. ಅದೃಷ್ಟದ ಪೂರ್ವ ಪುಣ್ಯಸ್ಥಾನದ ಒಡೆಯ ಶುಕ್ರಗ್ರಹ ಪ್ರಶ್ನಾತೀತವಾದ ಪ್ರಾಬಲ್ಯದಿಂದ ಉತ್ಛನಾಗಿ ಮಿಂಚಿದ್ದು ಗಮನಾರ್ಹವಾಗಿದೆ. 

ಕೇಂದ್ರಸರ್ಕಾರದ ಮಾಜಿಮಂತ್ರಿ ಮತ್ತು ಕುತಂತ್ರ ಸಮುಚ್ಚಯ
ವೈರಿಯ ಮನೆಯಲ್ಲಿ ಸ್ಥಿತನಾದ ಲಗ್ನಾಧಿಪತಿಯ ಮೇಲೆ ದುಷ್ಟನಾದ ಕ್ರಿಮಿನಲ್‌ ವಿಚಾರದಲ್ಲಿ ಲೈಂಗಿಕ ವಿಚಾರದಲ್ಲಿ ಗರಿಷ್ಠ ಪರಿಣಾಮಗಳನ್ನು ಸಕಾರಾತ್ಮಕವಾಗಿ ನೀಡಲು ಸಾಧ್ಯವೇ ಇರದ ಕುಜನಿಂದ ದೃಷ್ಟಿಸಲ್ಪಟ್ಟಿದ್ದಾನೆ. ಕುಜ ಉತ್ತಮನಾಗಿರಬೇಕಾದುದಕ್ಕೆ  ಅಸಾಧ್ಯವಾಗುವಂತೆ ಆತನೊಂದಿಗೆ ಶುಕ್ರನ ಉಪಸ್ಥಿತಿ ಮರಣಸ್ಥಾನದಲ್ಲಿ. ಈ ರೀತಿಯ ಕುಜಶುಕ್ರ ದುಷ್ಟ ಕೂಟದ ಮೇಲೆ ಶನಿ ಮಹಾರಾಜನ ದೃಷ್ಟಿ. ಮರಣ ಸ್ಥಾನಾಧಿಪತಿ  ಸೂರ್ಯನ ಕ್ರೂರ ದೃಷ್ಟಿ ಲಗ್ನಭಾವದ ಮೇಲೆ. ಈ ಎಲ್ಲಾ ಕಾರಣಗಳಿಂದ ಸ್ವಭಾವ ನೈತಿಕ ಚೌಕಟ್ಟುಗಳು ಉತ್ತಮವಾಗಿರಲು ಸಾಧ್ಯವೇ ಇಲ್ಲ. ಭಾರತ ಕಂಡ ಸ್ವಾತಂತ್ರೋತ್ತರ ಮಹಾ ತಲ್ಲಣದಲ್ಲಿ ಇವರ ಪಾತ್ರ ಬಹು ದೊಡ್ಡದು ಹಾಗೂ ಕುಖ್ಯಾತಿಯಿಂದ ಮೇರು ಸದೃಶವಾದದ್ದು. ಇವರು ಯಾರು ಎಂಬ ವಿಚಾರ ಬೇಡ, ಈ ಜನ್ಮದ್ದು ಇದೇ ಜನ್ಮದಲ್ಲಿ ಎಂಬಂತೆ ಬಹುದೊಡ್ಡ ಬೆಲೆ ತೆರಬೇಕಾಗಿ ಬಂದದ್ದೂ ಒಂದು ಪರ್ಯಾಸವೇ. ಭಾರತದ ಆಷೇìಯ ಕರ್ಮ ಸಿದ್ಧಾಂತ ಕೇತುಗ್ರಹ ಸ್ಥಿತಿಗತಿಯ ಮೇಲಿಂದ ಈ ಜನ್ಮದಲ್ಲಿಯೇ ಒಂದು ತೆರೆನಾದ ಭಾದೆಯನ್ನು ಒದಗಿಸಿತು. ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದಕ್ಕೆ ನಮ್ಮ ಈ ಮಾಜಿ ಮಂತ್ರಿಗಳೇ ಒಂದು ಜ್ವಲಂತ ಉದಾಹರಣೆ. ಭಾಗ್ಯದ ಸುಖದ ಪೂರ್ವಪುಣ್ಯದ ಸ್ಥಾನಗಳ ಗಟ್ಟಿತನಗಳು ಕೆಲವೊಮ್ಮೆ ಈ ಜನ್ಮದಲ್ಲಿ ಉಪ್ಪು ತಿಂದರೂ ಮುಂದಿನ ಜನ್ಮದಲ್ಲಿ ನೀರಿಗಾಗಿ ಪರದಾಟ ಮುಂದುವರೆಯುತ್ತದೆ.

ಮಿಲಿಟರಿ ಜನರಲ್‌ ಒಬ್ಬರ ದಾರುಣ ಪಾಡು
 ವ್ಯಕ್ತಿತ್ವಕ್ಕೆ ದೋಷ ತರುವ ನೀಚ ಚಂದ್ರ ವ್ಯಕ್ತಿತ್ವವನ್ನು ನಿರ್ದಯವಾಗಿರಿಸಲು ಉರುವಲು ಒದಗಿಸುವುದು ಮಾರಕ ರಾಹು.  ಕುಜ ಕುತಂತ್ರಕ್ಕೆ ಕಾರಣನಾದ ಚೈತನ್ಯ ಇಟ್ಟುಕೊಂಡ ಶನೈಶ್ಚರನ ನಕ್ಷತ್ರದಲ್ಲಿ ಕುಳಿತ ದುರ್ಬಲ ಗುರು ಕಾರಣನಾದ.  ಯುದ್ಧವೊಂದನ್ನು ಪಕ್ಕದ ದೇಶದ ಮೇಲೆ ಸಾರಿ ರಕ್ತದೋಕುಳಿಗೆ ಕಾರಣವಾಗುವಂತೆ ಮಿಲಿಟರಿ ಜನರಲ್‌ ಒಬ್ಬರನ್ನು ಪ್ರೇರೇಪಿಸಿ ಒಂದು ದೇಶವನ್ನು ಅರಾಜಕತೆಯ ಅಂಚಿಗೆ ತಂದ್ದದ್ದು ಆ ದೇಶದ ಯಾತನೆಯೋ, ಮಿಲಿಟರಿ ಜನರಲ್‌ ಆಗಿದವರ ಪಾಡೋ ತಿಳಿಯದು. ಆಗ ಶನಿಕಾಟ ಒಟ್ಟು ಏಳುವರೆ ವರ್ಷದ್ದು. ಈಗ ರಾಹುದಶಾ ಪ್ರಮಾಣಕ್ಕೂ ಎರವಾಗಬಹುದಾದಷ್ಟು ಉರಿಯನ್ನು ಶನೈಶ್ಚರ ಮೂಲಕ ಒದಗಿಸುತ್ತಲೇ ಇದೆ. ಈ ಶನೈಶ್ಚರನೇ ಮರಣ ಸ್ಥಾನದ ಅಧಿಪತಿ. ತಿಂದಿರುವ ಉಪ್ಪಿಗೆ ನೀರಂತೂ ಸಿದ್ಧವಾಗುವ ಮಟ್ಟದಲ್ಲಿದೆ. ಅಧಿಕಾರಕ್ಕಾಗಿ ಎಲ್ಲಾ ರೀತಿಯ ಕುತಂತ್ರಗಳನ್ನು ನಡೆಸಿ ಗೆಲ್ಲಿಸಲೆತ್ನಿಸಿದ ಪ್ರತ್ಯಕ್ಷ ಕೌರವ ಈತ.

Advertisement

ಒಟ್ಟಿನಲ್ಲಿ ಜನ್ಮ ಕುಂಡಲಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಒಮ್ಮೊಮ್ಮೆ ಅನಿಸುತ್ತದೆ ಎಲ್ಲವೂ ಹಣೆಬರಹವಾಗಿದ್ದರೆ ಬದುಕಿನ ಅರ್ಥ ಏನು? ಪುರುಷಸ್ಯ ಭಾಗ್ಯಂ ದೈವೋನ ಜಾನಾತಿ ಎಂಬ ಮಾತೂ ಇದೆ. ಹೀಗಾಗಿ ಆತ್ಮವನ್ನು ವಿಶ್ಲೇಷಿಸಿಕೊಳ್ಳುವ ಮೌನಕ್ಕೆ, ಮೌನದೊಳಗಿನ ಓಂಕಾರಕ್ಕೆ ಕಿವಿ ತೆರೆದರೆ ಸಾತ್ವಿಕ ಗುಣವನ್ನು ಕಾಣುವ ದೈವತ್ವಕ್ಕೆ ತೆರೆದುಕೊಳ್ಳುವ ಆದ್ರì ಹೃದಯವನ್ನು ಮೊಳಕೆಯೊಡೆಸಬಹುದು. ಆದರೆ ಸಾತ್ವಿಕತೆ ದಡ್ಡತನ ಬೋಳೆತನ ಎಂಬ ಅಪಹಾಸ್ಯಕ್ಕೆ ಗುರಿಯಾಗುವ ಕಾಲದಲ್ಲಿ ನಾವಿದ್ದೇವೆ ಎಂದೂ ಸ್ವಾಭಿಮಾನ ಬಿಡಬೇಡ ಎಂಬ ಮಾತೊಂದಿದೆ. ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎಂಬ ನಾಣ್ನುಡಿಯೂ ಇದೆ. ಯಾವುದು ಆಖೈರಿನ ಸತ್ಯ? ಯಾವುದು ಆಖೈರಿನ ಸಾತ್ವಿಕತೆ? ನಮ್ಮ ಕೆಲಸಕಾರ್ಯಗಳು ನಮಗೇ ನಾಚಿಕೆ ತಾರದಿದ್ದರೆ ಇನ್ನೊಬ್ಬರನ್ನು ಶತಾಯಗತಾಯ ಮುಗಿಸುತ್ತೇನೆ ಎಂಬ ಭಂಡತನ ಕ್ರೌರ್ಯ ತುಂಬಿಕೊಂಡರೆ ಏನಾಗಬಹುದು ಎಂಬುದಕ್ಕೆ ಪ್ರಸ್ತುತ ವರ್ತಮಾನ ಭಾರತದಲ್ಲಂತೂ ಅತ್ಯಂತ ಸ್ಪಷ್ಟವಾಗಿ ಹರಳುಗಟ್ಟಿದೆ. 

ಅನಂತಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next