Advertisement

ಬಂಗಾಳದಲ್ಲಿ ಮುಂದುವರಿದ ಹಿಂಸೆ; ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ

09:37 AM May 18, 2019 | Vishnu Das |

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಘರ್ಷಣೆಗಳಹಿಂಸೆ ಮುಂದುವರಿದಿದ್ದು, ಗುರುವಾರ ರಾತ್ರಿ 24 ಪರಗಣ ಜಿಲ್ಲೆಯ ನಾಗೇರ್‌ ಬಜಾರ್‌ನಲ್ಲಿ ಡಂ ಡಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮಿಕ್‌ ಭಟ್ಟಾಚಾರ್ಯ ಅವರಮೇಲೆ ದಾಳಿ ನಡೆಸಲಾಗಿದೆ. ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ ಭಟ್ಟಾಚಾರ್ಯ ಅವರ ಕಾರನ್ನು ಸಂಪೂರ್ಣವಾಗಿ ಧ್ವಂಸಗೈದಿದ್ದಾರೆ.

Advertisement

ಇನ್ನೊಂದೆಡೆ ಆಯೋಗ ಗೊತ್ತುಪಡಿಸಿದ ಅವಧಿ 10 ಗಂಟೆಯ ಬಳಿಕವೂ ಬಿಜೆಪಿ ನಾಯಕ ಮುಕುಲ್‌ ರಾಯ್‌ ಅವರು ಪ್ರಚಾರ ನಿರತರಾಗಿದ್ದರು ಎಂದು ಟಿಎಂಸಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸಿಪಿಐ(ಎಂ) ಕಾರ್ಯಕರ್ತರೊಂದಿಗೆ ರಾಯ್‌ ಅವರು ಮುಚ್ಚಿದ ಬಾಗಿಲಿನ ಮಾತುಕತೆ ನಡೆಸುತ್ತಿದ್ದ ವೇಳೆ ಟಿಎಂ ಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ರಾಯ್‌ ಅವರ ಕಾರನ್ನೂ ಜಖಂಗೊಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳು ಆಗಮಿಸಿ ರಾಯ್‌ ಅವರನ್ನು ಸುರಕ್ಷಿತವಾಗಿ ಕರೆದೊಯ್ದಿವೆ.

ಕೆಲವರು ನನ್ನ ಬಳಿಗೆ ಬಂದು ಕಲ್ಲು ತೂರಾಟ ಮಾಡಿ ಕಾರಿನ ಗಾಜುಗಳನ್ನು ಧ್ವಂಸಗೈದಿದ್ದಾರೆ. ನಾನು ಪೊಲೀಸರಿಗೆ ದೂರು ಸಲ್ಲಿಸುತ್ತಿದ್ದೇನೆ. ಮಮತಾ ಬ್ಯಾನರ್ಜಿ ಅವರು ಹೆದರಿರುವುದು ಮಾತ್ರ ಸತ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next