Advertisement

ಡಂಡಂ: ಗುಂಡಿಕ್ಕಿ ಟಿಎಂಸಿ ನಾಯಕನ ಬರ್ಬರ ಹತ್ಯೆ

09:37 AM Jun 06, 2019 | Vishnu Das |

ಡಂಡಂ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

Advertisement

ಡಂಡಂ ನಗರಸಭೆಯ ವಾರ್ಡ್‌ 6 ರ ಅಧ್ಯಕ್ಷರಾಗಿರುವ ನಿರ್ಮಲ್‌ ಕುಂಡು ಅವರನ್ನು ಬೈಕ್‌ಗಳಲ್ಲಿ ಆಗಮಿಸಿದ ನಾಲ್ಕರಿಂದ ಐವರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಕುಂಡು ಅವರನ್ನುತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚತಲೆಗೆ ಗುಂಡು ಹೊಕ್ಕಿದ್ದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದು ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಯಾವ ಕಾರಣಕ್ಕಾಗಿ ಹತ್ಯೆಗೈಯಲಾಗಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next