Advertisement

TMC ನಾಯಕನ ಗುಂಡಿಕ್ಕಿ ಹತ್ಯೆ

11:33 PM Nov 13, 2023 | Team Udayavani |

ಜಾಯ್‌ನಗರ್‌: ಪಶ್ಚಿಮ ಬಂಗಾಲದ ದಕ್ಷಿಣ 24 ಪರಾಗಣ ಜಿಲ್ಲೆಯ ಜಾಯ್‌ನಗರದಲ್ಲಿ ಸೋಮವಾರ ಟಿಎಂಸಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಬೆಂಬಲಿಗರು, ಶಂಕಿತ ಆರೋಪಿ ಯೊಬ್ಬನನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಜಾಯ್‌ನಗರ ಬಮುಂಗಾಚಿಯ ಟಿಎಂಸಿ ನಾಯಕ ಸೈಫ‌ುದ್ದೀನ್‌ ಲಷ್ಕರ್‌(47) ಅವರನ್ನು ಸೋಮವಾರ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೃತ್ಯವೆಸಗಿ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಹೇಳಲಾಗಿದ್ದ ಇಬ್ಬರನ್ನು ಅವರ ಬೆಂಬಲಿಗರು ಸೆರೆ ಹಿಡಿದಿದ್ದಾರೆ. ಕ್ರುದ್ಧಗೊಂಡ ಬೆಂಬಲಿಗರು ಶಂಕಿತರ ಪೈಕಿ ಒಬ್ಬನನ್ನು ಥಳಿಸಿದ್ದಾರೆ. ಹೊಡೆತಗಳ ರಭಸ ತಡೆಯಲಾರದೆ, ಆತ ಅಸುನೀಗಿದ್ದಾನೆ. ಮತ್ತೂಬ್ಬ ಶಂಕಿತನನ್ನು ಪೊಲೀಸರು ರಕ್ಷಿಸಿ, ಬಂಧಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next