Advertisement

ಪಶ್ಚಿಮ ಬಂಗಾಲದಲ್ಲಿ 7ನೇ ಹಂತಕ್ಕೆ ಇಂದು ಮತದಾನ :34 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

12:33 AM Apr 26, 2021 | Team Udayavani |

ಪ. ಬಂಗಾಲದಲ್ಲಿ 7ನೇ ಹಂತಕ್ಕೆ ಸೋಮವಾರ ಮತದಾನ ನಡೆಯಲಿದೆ. 34 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು 86 ಲಕ್ಷಕ್ಕೂ ಅಧಿಕ ಮತದಾರರು ನಿರ್ಧರಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕೇಂದ್ರ ಭದ್ರತ ಪಡೆಯ 796 ತುಕಡಿಗಳು 12,068 ಮತಕೇಂದ್ರಗಳಿಗೆ ನಿಯೋಜನೆಗೊಂಡಿದ್ದಾರೆ.

Advertisement

ಟಿಎಂಸಿ ಅಭ್ಯರ್ಥಿ ಕೊರೊನಾಕ್ಕೆ ಬಲಿ: ಖರ್ಡಾಹ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಕಾಜಲ್‌ ಸಿನ್ಹಾ ಅವರು ಕೊರೊನಾ ತಗುಲಿ ಸಾವನ್ನಪ್ಪಿದ್ದಾರೆ. ಎ.22ರಂದು ಈ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಪಕ್ಷದ ಅಭ್ಯರ್ಥಿ ಕಳೆದುಕೊಂಡ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ, “ಇದು ಭಾರೀ ಆಘಾತಕಾರಿ ವಿಚಾರ. ಪಕ್ಷಕ್ಕಾಗಿ ಸಿನ್ಹಾ ಸರ್ವಸ್ವ ಅರ್ಪಿಸಿದ್ದರು’ ಎಂದು ಟ್ವೀಟಿಸಿ, ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next