Advertisement

ಸೇತುವೆ ಶಿಥಿಲ: ವಿಜಯಪುರ, ಬಾಗಲಕೋಟೆ ರಸ್ತೆ ಬಂದ್‌

11:27 PM Aug 18, 2019 | Team Udayavani |

ಜಮಖಂಡಿ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಸೇತುವಾದ ಚಿಕ್ಕಪಡಸಲಗಿ ಸೇತುವೆ ಕೃಷ್ಣಾ ನದಿಯ ಪ್ರವಾಹಕ್ಕೆ ಭಾನುವಾರ ಶಿಥಿಲಗೊಂಡಿದೆ. ಸೇತುವೆ ಎರಡು ಬದಿಗೆ ನಿರ್ಮಿಸಿದ್ದ 22 ಅಪಘಾತ ತಡೆ ಕಂಬಗಳು ಕೊಚ್ಚಿ ಹೋಗಿವೆ. ಸೇತುವೆ ಮಧ್ಯಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಾಲೂಕು ಆಡಳಿತ ವರದಿ ತಿಳಿಸಿದೆ.

Advertisement

ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಈ ಸೇತುವೆ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಅವಲಂಬಿಸಿದೆ. ನಿತ್ಯ 8 ಸಾವಿರ ಟ್ರಕ್‌, 750ಕ್ಕೂ ಹೆಚ್ಚು ಸರ್ಕಾರಿ ಸಾರಿಗೆ ಬಸ್‌, 10 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನ, 6 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಓಡಾಡುವ ರಸ್ತೆ ಸ್ಥಗಿತಗೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next