Advertisement

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

12:17 AM May 01, 2024 | Team Udayavani |

ಕೋಲ್ಕತಾ: ಚುನಾವಣೆ ಪ್ರಚಾರದ ವೇಳೆ ಮಂಗಳಸೂತ್ರ ಸಹಿತ ಸಂಪತ್ತು ಹಂಚಿಕೆ ವಿಚಾರದ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಪಶ್ಚಿಮ ಬಂಗಾಲದ ಬಿಭ್ರೂಮ್‌ನಲ್ಲಿ ಮಾತನಾಡಿದ ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌ “ಬಿಜೆಪಿ ವತಿಯಿಂದಲೂ ಸಂಪತ್ತು ಹಂಚಿಕೆ ಮಾಡುತ್ತೇವೆ’ ಎಂದಿದ್ದಾರೆ.

Advertisement

ಆದರೆ ಅದಕ್ಕೊಂದು ತಿರುವನ್ನೂ ನೀಡಿದ್ದಾರೆ. ಪಶ್ಚಿಮ ಬಂಗಾಲದಲ್ಲಿರುವ ಮಾಫಿಯಾ ಗ್ಯಾಂಗ್‌ನ ಆಸ್ತಿ, ಸಂಪತ್ತು ವಶಕ್ಕೆ ಪಡೆದು ಅವುಗಳನ್ನು ಬಡವರಿಗೆ ಹಂಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.  “ಉತ್ತರ ಪ್ರದೇಶದಲ್ಲಿ ಇರುವ ಎಲ್ಲ ದೊಡ್ಡ ಮಾಫಿಯಾ ಗ್ಯಾಂಗ್‌ಗಳು ಮತ್ತು ಅದರ ನಾಯಕರು ರಾಜ್ಯ ತೊರೆದಿದ್ದಾರೆ ಅಥವಾ ಅವರನ್ನು ಸಾಯಿಸಲಾಗಿದೆ’ ಎಂದರು.

“2017ಕ್ಕೂ ಮೊದಲು ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಮಾಫಿಯಾ ಮಂದಿ, ಈಗ ತಮ್ಮ ಜೀವನಕ್ಕಾಗಿ ಬೇಡುತ್ತಿದ್ದಾರೆ. “ಬೀದಿಬದಿ ವ್ಯಾಪಾರ ಮಾಡುತ್ತಾ, ಕುಟುಂಬದವರ ಪಾಲನೆ ಮಾಡುತ್ತಾ ಹೇಗೋ ಬದುಕುತ್ತೇವೆ. ದರೋಡೆ ಮಾಡುವುದಿಲ್ಲ, ಬಡವರನ್ನು ಲೂಟಿ ಮಾಡುವುದಿಲ್ಲ, ಮಹಿಳೆಯರ ದೌರ್ಜನ್ಯ ಮಾಡುವುದಿಲ್ಲ ಅಥವಾ ಉದ್ಯಮಿಗಳನ್ನು ಅಪಹರಣ ಮಾಡುವುದಿಲ್ಲ’ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಉ.ಪ್ರ.ಸಿಎಂ ಯೋಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next