Advertisement

“ಅಧಿವೇಶನ ನಡೆಸಲು ಹೇಗೆ ಬಿಡಲ್ವೋ ನೋಡ್ತೇವೆ’

11:48 PM Feb 28, 2020 | Team Udayavani |

ಬೆಂಗಳೂರು: ಎಸ್‌.ಎಸ್‌.ದೊರೆಸ್ವಾಮಿಯವರ ಬಗ್ಗೆ ಯತ್ನಾಳ್‌ ಹೇಳಿಕೆ ನಾನು ಸಮರ್ಥಿಸುತ್ತೇನೆ. ಕಾಂಗ್ರೆಸ್‌ನವರು ಅಧಿವೇಶನ ನಡೆಯಲು ಬಿಡಲ್ಲಾ ಅಂತ ಹೇಳಿದ್ದಾರೆ. ಹೇಗೆ ಬಿಡಲ್ವೋ ನಾವೂ ನೋಡ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇವರು ಸದನ ನಡೆಸಲು ಬಿಡದಿದ್ದರೆ ನಾವು ಸುಮ್ಮನೆ ಇರ‍್ತೀವಾ ಎಂದು ಪ್ರಶ್ನಿಸಿದರು. ಯತ್ನಾಳ್‌ ಹೇಳಿಕೆಗೆ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಲೆಗಡುಕ ಎಂದು ಸಿದ್ದರಾಮಯ್ಯ ಹೇಳಿದಾಗಲೇ ಅವರನ್ನು ಪಕ್ಷದಿಂದ ಹೊರಗೆ ಹಾಕಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್‌ನವರು ಸಿಎಎ ಬಗ್ಗೆ ಹೋರಾಟ ಮಾಡಲಿ ಬೇಡ ಅನ್ನಲ್ಲಾ, ಆದರೆ ದೇಶದ್ರೋಹಿಗಳ ಪರ ವಕಾಲತ್ತು ವಹಿಸುವುದು ಬೇಡ ಎಂದರು. ದೆಹಲಿ ಗಲಭೆಗೆ ಬಿಜೆಪಿ ಕಾರಣ ಅಲ್ಲ. ರಾಷ್ಟ್ರದ್ರೋಹಿಗಳು ಮಾಡಿದ್ದಾರೆ. ಕಾಂಗ್ರೆಸ್‌ನವರೇ ಅವರನ್ನು ಯಾಕೆ ಸಪೋರ್ಟ್‌ ಮಾಡ್ತೀರಾ? ಮೇಲ್ನೋಟಕ್ಕೆ ರಾಷ್ಟ್ರ ಭಕ್ತಿ ತೋರಿಸಬೇಡಿ. ನಿಮ್ಮ ವಿಚಾರವೇನು? ರಾಷ್ಟ್ರ ಭಕ್ತರ ಪರವೋ ಅಥವಾ ರಾಷ್ಟ್ರ ದ್ರೋಹಿಗಳ ಪರವೋ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next