Advertisement

PM Cares Fund ಹಿಂದಿನ ರಹಸ್ಯ ಬಯಲು ಮಾಡುವೆವು: ಸ್ಟಾಲಿನ್‌

12:36 AM Mar 23, 2024 | Team Udayavani |

ಚೆನ್ನೈ: ಕೇಂದ್ರದಲ್ಲಿ ‘ಇಂಡಿಯಾ ಒಕ್ಕೂಟ’ವು ಅಧಿಕಾರಕ್ಕೆ ಬರುತ್ತಿದ್ದಂತೆ “ಪಿಎಂ ಕೇರ್ಸ್‌ ಫ‌ಂಡ್‌’ ಹಿಂದಿನ ರಹಸ್ಯ ಬಯಲು ಮಾಡಲಾಗು ವುದು ಎಂದು ತಮಿಳುನಾಡು ಮುಖ್ಯ ಮಂತ್ರಿಯೂ ಆಗಿರುವ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

Advertisement

ತಮಿಳುನಾಡಿನ ತಿರುಚಿರಾಪ್ಪಳ್ಳಿಯ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ.ಸ್ಟಾಲಿನ್‌ ಅವರು, “ಚುನಾವಣ ಬಾಂಡ್‌ ರೀತಿಯಲ್ಲಿ ಅವರು (ಬಿಜೆಪಿ ಮತ್ತು ಕೇಂದ್ರ) ಮತ್ತೂಂದು ರೀತಿಯಲ್ಲಿ ಹಣ ಸಂಗ್ರಹಿಸಿದ್ದಾರೆ ಮತ್ತು ಅದಕ್ಕೆ ಪಿಎಂ ಕೇರ್ಸ್‌ ಫ‌ಂಡ್‌ ಎಂದು ಹೆಸರಿಸಲಾಗಿದೆ. ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬರುತ್ತಿದ್ದಂತೆ ಜೂನ್‌ ತಿಂಗಳಲ್ಲಿ ಈ ಫ‌ಂಡ್‌ ಹಿಂದಿನ ಎಲ್ಲ ರಹಸ್ಯ ಬಯಲಾಗಲಿದೆ’ ಎಂದು ಹೇಳಿದರು.

“ಅಬಕಾರಿ ನೀತಿ ಹಗರಣದಲ್ಲಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನದ ಹಿಂದೆ ಬಿಜೆಪಿಯ ಸೋಲಿನ ಭಯ ಅಡಗಿದೆ. ಪ್ರಧಾನಿ ಮೋದಿಯ ಅಧಿಕಾರಾವಾಧಿ ಕೊನೆಯಾಗುತ್ತಿರುವುದರಿಂದ ಅವರಿಗೆ ನಿದ್ದೆ ಬರುತ್ತಿಲ್ಲ. ಚುನಾವಣೆಯ ಸೋಲು ಅವರ ಕಣ್ಣು ಮತ್ತು ಮುಖದಲ್ಲಿ ಕಾಣುತ್ತಿದೆ’ ಎಂದು ಡಿಎಂಕೆ ನಾಯಕ ಸ್ಟಾಲಿನ್‌ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next