Advertisement

Chennai ನೀತಿ ಸಂಹಿತೆ ಸಡಿಲಿಸಿ: ತಮಿಳುನಾಡು ಆಗ್ರಹ

11:45 PM Apr 21, 2024 | Team Udayavani |

ಚೆನ್ನೈ: ತಮಿಳುನಾಡಿನ ಎಲ್ಲ 39 ಕ್ಷೇತ್ರಗಳಿಗೆ ಮತದಾನ ಎ. 19ರಂದು ಮುಕ್ತಾಯವಾಗಿದೆ. ಹೀಗಿದ್ದರೂ ಜೂ. 4ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ, ಅದರ ಮಿತ್ರ ಪಕ್ಷ ಕಾಂಗ್ರೆಸ್‌ ಇನ್ನೂ ಒಂದೂವರೆ ತಿಂಗಳ ಕಾಲ ಮಾದರಿ ನೀತಿ ಸಂಹಿತೆ ರಾಜ್ಯದಲ್ಲೇಕೆ ಜಾರಿಯಲ್ಲಿರಬೇಕು ಎಂದು ಪ್ರಶ್ನಿಸಿವೆ.

Advertisement

ಈ ಕುರಿತಾಗಿ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ, ಚುನಾವಣೆ ಮುಕ್ತಾಯವಾದ ಬಳಿಕವೂ ಮಾದರಿ ನೀತಿ ಸಂಹಿತೆ ಮುಂದುವರಿಸುವುದು ಅಸಮಂಜಸ. ಇದು ನಾಗರಿಕರ ಹಕ್ಕುಗಳನ್ನು ಉಲ್ಲಂ ಸುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಚುನಾವಣೆಯ ಬಳಿಕ 7 ದಿನಗಳ ಕಾಲ ನೀತಿ ಸಂಹಿತೆಯನ್ನು ಮುಂದುವರಿಸಲಾಗುತ್ತದೆ. ಆದರೆ ಜೂ. 4ರ ವರೆಗೆ ಏಕೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣ ಆಯುಕ್ತರಿಗೆ ಪತ್ರ ಬರೆದಿ ರುವ ಕಾಂಗ್ರೆಸ್‌ ಸಂಸದ ಮಾಣಿಕ್ಯಂ ಠಾಗೋರ್‌ ನೀತಿ ಸಂಹಿತೆಯಿಂದಾಗಿ ಸಣ್ಣ ಉದ್ದಿಮೆದಾರರಿಗೆ ತೊಂದರೆಯಾಗುತ್ತಿದೆ. 50 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಸಾಗಿಸಲು ಅವಕಾಶವಿಲ್ಲದ ಕಾರಣ ಇದನ್ನು ಹಿಂಪಡೆಯಬೇಕು. ಸಣ್ಣ ಉದ್ದಿಮೆದಾರರ ಬೇಡಿಕೆಯನ್ನು ಆಲಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next