Advertisement

I.N.D.I.A ಕೂಟಕ್ಕೆ ಜೂ.4ರಂದು ಸಿಹಿ ವಿಜಯ: ಸ್ಟಾಲಿನ್‌ ಭವಿಷ್ಯ!

12:59 AM Apr 14, 2024 | Team Udayavani |

ಹೊಸದಿಲ್ಲಿ: “ಜೂ.4ರಂದು ಇಂಡಿಯಾ ಒಕ್ಕೂಟವು ಸಿಹಿಯಾದ ಗೆಲುವನ್ನು ಸಾಧಿಸಲಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ಕೊಯಮತ್ತೂರು ರ್ಯಾಲಿಗೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಯವರು ಮಳಿಗೆಯೊಂದರಿಂದ ತಾವೇ ಮೈಸೂರು ಪಾಕ್‌ ಖರೀದಿಸಿ ತಂದು ಸ್ಟಾಲಿನ್‌ರಿಗೆ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, “ನನ್ನ ಸೋದರನ ಸಿಹಿಯಾದ ನಡೆ ನನ್ನ ಮನಸ್ಸನ್ನು ಮುದಗೊಳಿಸಿತು. ಜೂ.4ರಂದು ಇಂಡಿಯಾ ಒಕ್ಕೂಟ ಇದೇ ರೀತಿಯ ಸಿಹಿ ಗೆಲುವನ್ನು ಗಳಿಸಲಿದೆ’ ಎಂದಿದ್ದಾರೆ.

ನಾವು ಸಂವಿಧಾನ ರಕ್ಷಕರು: ರಾಹುಲ್‌
ಮಹಾರಾಷ್ಟ್ರದ ಭಂಡಾರಾ ಮತ್ತು ಛತ್ತೀಸ್‌ಗಢದ ಜಗದಲ್ಪುರದಲ್ಲಿ ಶನಿವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚುನಾವಣ ರ್ಯಾಲಿ ನಡೆಸಿದ್ದಾರೆ. ಈ ಚುನಾವಣೆಯು ಸಂವಿಧಾನ ರಕ್ಷಿಸುವವರು ಮತ್ತು ಸಂವಿಧಾನ ನಾಶ ಮಾಡಲು ಹೊರಟವರ ನಡುವಿನ ಯುದ್ಧ ಎಂದು ಅವರು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next