Advertisement
ಶುಕ್ರವಾರ ಕೊಯಮತ್ತೂರು ರ್ಯಾಲಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಯವರು ಮಳಿಗೆಯೊಂದರಿಂದ ತಾವೇ ಮೈಸೂರು ಪಾಕ್ ಖರೀದಿಸಿ ತಂದು ಸ್ಟಾಲಿನ್ರಿಗೆ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, “ನನ್ನ ಸೋದರನ ಸಿಹಿಯಾದ ನಡೆ ನನ್ನ ಮನಸ್ಸನ್ನು ಮುದಗೊಳಿಸಿತು. ಜೂ.4ರಂದು ಇಂಡಿಯಾ ಒಕ್ಕೂಟ ಇದೇ ರೀತಿಯ ಸಿಹಿ ಗೆಲುವನ್ನು ಗಳಿಸಲಿದೆ’ ಎಂದಿದ್ದಾರೆ.
ಮಹಾರಾಷ್ಟ್ರದ ಭಂಡಾರಾ ಮತ್ತು ಛತ್ತೀಸ್ಗಢದ ಜಗದಲ್ಪುರದಲ್ಲಿ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣ ರ್ಯಾಲಿ ನಡೆಸಿದ್ದಾರೆ. ಈ ಚುನಾವಣೆಯು ಸಂವಿಧಾನ ರಕ್ಷಿಸುವವರು ಮತ್ತು ಸಂವಿಧಾನ ನಾಶ ಮಾಡಲು ಹೊರಟವರ ನಡುವಿನ ಯುದ್ಧ ಎಂದು ಅವರು ಬಣ್ಣಿಸಿದ್ದಾರೆ.