Advertisement

ಸಹೋದರಿಯೊಂದಿಗೆ ಮಾತನಾಡಲು ಬಿಡಿ: ಸಿ.ಡಿ ಯುವತಿಯ ತಮ್ಮನ ಅಳಲು

04:00 PM Apr 01, 2021 | Team Udayavani |

ವಿಜಯಪುರ: ನಮ್ಮ ಸಹೋದರಿಯನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಕೂಡಲೇ ನಮ್ಮ ಸಹೋದರಿಯನ್ನು ನಮ್ಮೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಸಿ.ಡಿ ಪ್ರಕರಣದ ಯುವತಿಯ ಸಹೋದರರು ಆಗ್ರಹಿಸಿದ್ದಾರೆ.

Advertisement

ಗುರುವಾರ ಬೆಳಗಾವಿ ನಗರದಿಂದ ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಜ್ಜಿಯ ಮನೆಗೆ ಸ್ಥಳಾಂತರಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಡಿ ಲೇಡಿ ಸಹೋದರರು ಹಾಗೂ ಆಕೆಯ ತಂದೆ, ನಮ್ಮ ಮಗಳೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಎಸ್ ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಅವಕಾಶ ನೀಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಸಿಡಿಲೇಡಿ ಕುಟುಂಬ ವಿಜಯಪುರ ಜಿಲ್ಲೆಗೆ ಸ್ಥಳಾಂತರ

ಸದ್ಯ ಯಾರಿಂದಲೂ ನಮಗೆ ಭಯವಿಲ್ಲ, ಸೂಕ್ತ ಪೊಲೀಸ್ ಭದ್ರತೆ ಸಿಕ್ಕಿದೆ. ಪೊಲೀಸ್ ಭದ್ರತೆಯಲ್ಲೇ ಬೆಳಗಾವಿಯಿಂದ ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ.

ತಮ್ಮ‌ ರಾಜಕೀಯ ಲಾಭಕ್ಕಾಗಿ ಡಿ.ಕೆ.ಶಿವಕುಮಾರ್ ನಮ್ಮ ಸಹೋದರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ಅಗತ್ಯ ದಾಖಲೆಗಳಿವೆ. ಕೆಲವನ್ನು ಎಸ್ ಐಟಿ ತನಿಖಾ ತಂಡಕ್ಕೆ ನೀಡಿದ್ದೇವೆ. ನಮ್ಮಲ್ಲಿ ಇನ್ನೂ ಕೆಲ ದಾಖಲೆಗಳಿದ್ದು, ಸಮಯ ಬಂದಾಗ ಎಸ್ ಐಟಿ ತಂಡಕ್ಕೆ ನೀಡುತ್ತೇವೆ ಎಂದಿದ್ಧಾರೆ.

Advertisement

ನಮ್ಮ ಮಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಲೂ ಆಕೆಯ ಈಗಿನ ನಂಬರ್ ನಮ್ಮ ಬಳಿ ಇಲ್ಲವಾಗಿದೆ. ಡಿ.ಕೆ.ಶಿವಕುಮಾರ್ ರಾಜಕೀಯ ಷಡ್ಯಂತ್ರದ ಪ್ರಭಾವಿತಳಾಗಿ ಒತ್ತಡದಲ್ಲಿ ಇರುವ ಆಕೆಗೆ ನಮ್ಮ ಸಾಂತ್ವನದ ಅಗತ್ಯವಿದೆ. ಹೀಗಾಗಿ ಮಗಳೊಂದಿಗೆ ಮಾತನಾಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next