Advertisement

ನ್ಯಾಯ ಕೊಡಿ, ನ್ಯಾಯ ಕೊಡಿ ಸ್ಪೀಕರ್ ಅವರೇ ನ್ಯಾಯ ಕೊಡಿ: ಚಪ್ಪಾಳೆ ಪ್ರತಿಭಟನೆ

01:01 PM Feb 17, 2022 | Team Udayavani |

ಬೆಂಗಳೂರು : ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಗುರುವಾರವೂ ವಿಧಾನಸಭೆಯಲ್ಲಿ ಧರಣಿ ಮುಂದುವರಿದಿದ್ದು, ” ನ್ಯಾಯ ಕೊಡಿ ನ್ಯಾಯ ಕೊಡಿ ಸ್ಪೀಕರ್ ಅವರೇ ನ್ಯಾಯ ಕೊಡಿ ” ಎಂದು ಕಾಂಗ್ರೆಸ್ ಶಾಸಕರು ಚಪ್ಪಾಳೆ ಪ್ರತಿಭಟನೆ ನಡೆಸಿದ್ದಾರೆ.

Advertisement

ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಂತಾಪ ನಿರ್ಣಯವನ್ನು ಸ್ಪೀಕರ್ ಮಂಡಿಸಿದರು. ಆ ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಈ ಬಗ್ಗೆ ಪ್ರತಿಭಟನಾ ನಿರತ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದರು ಪ್ರಯೋಜನವಾಗಲಿಲ್ಲ.

ಹೀಗಾಗಿ ಕಾಂಗ್ರೆಸ್ ಶಾಸಕರು ಘೋಷಣೆಗೆ ಶರಣಾದರು. ” ದೇಶದ್ರೋಹಿ ದೇಶದ್ರೋಹಿ ಈಶ್ಚರಪ್ಪ ದೇಶದ್ರೋಹಿ ” ಎಂದು ಕೂಗಿ ಈಶ್ವರಪ್ಪ ಅವರನ್ನು ಕೆರಳಿಸುವ ಪ್ರಯತ್ನ ನಡೆಸಿದರು.

ಆದರೆ ಪ್ರಶ್ನೋತ್ತರ ಕಲಾಪ ನಿಲ್ಲಲಿಲ್ಲ. ಹೀಗಾಗಿ ಸ್ಪೀಕರ್ ಪೀಠದತ್ತ ಮುಖಮಾಡಿ ” ನ್ಯಾಯ ಕೊಡಿ ನ್ಯಾಯ ಕೊಡಿ ಸ್ಪೀಕರ್ ಅವರೇ ನ್ಯಾಯ ಕೊಡಿ” , ಕಣ್ಣು ಬಿಡಿ ಕಣ್ಣು ಬಿಡಿ ಸ್ಪೀಕರ್ ಅವರೇ ಕಣ್ಣು ಬಿಡಿ ಎಂದು ಚಪ್ಪಾಳೆ ಹಾಕಿ ಘೋಷಣೆ ಹಾಕಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸ್ಟ್ಯಾಂಪ್ ವಿಧೇಯಕವೂ ಮಂಡನೆಯಾಯ್ತು. ಆದರೆ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next