Advertisement

ಚುನಾವಣೆ ಖರ್ಚಿಗೆ ಭಿಕ್ಷೆ  ಬೇಡುತ್ತೇವೆ: ಮುತಾಲಿಕ್‌

06:20 AM Mar 12, 2018 | |

ಮುಧೋಳ: 2018ರ ಚುನಾವಣಾ ಖರ್ಚಿಗಾಗಿ ಜನರಿಂದ ಭಿಕ್ಷೆ ಬೇಡುತ್ತೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ತಿಳಿಸಿದರು. 

Advertisement

ನಗರದ ದಾನಮ್ಮದೇವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಶಿವಸೇನಾ, ಶ್ರೀರಾಮಸೇನಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯವನ್ನಾಳಿದ ಯಾವ ಪಕ್ಷಗಳೂ ಹಿಂದುತ್ವದ ಬಗ್ಗೆ ಕಾಳಜಿ ಹೊಂದಿಲ್ಲ. ಹಿಂದುತ್ವದ ಆಧಾರದ ಮೇಲೆ ಬಿಜೆಪಿಗೆ ನಾವು ಬೆಂಬಲಿಸುತ್ತ ಬಂದೆವು. ಆದರೆ ರಾಜಕೀಯವಾಗಿ ಅವರು ನಮ್ಮ ಬೆಂಬಲ ಪಡೆದು ರಾಜಕಾರಣ ಮಾಡಿದರೆ ವಿನಃ ಹಿಂದುತ್ವದ ಪರವಾಗಿ ಕೆಲಸ ಮಾಡುತ್ತಿಲ್ಲ. ಮತಾಂತರ, ಲವ್‌ ಜಿಹಾದ್‌ ಮೂಲಕ ಹಿಂದೂ ಮಹಿಳೆಯರ ಅಪಹರಣ, ಹಿಂದೂ ಯುವಕರ ಕೊಲೆ, ಪ್ರಾಣ ಬೆದರಿಕೆ, ಭಯೋತ್ಪಾದನೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಬಿಜೆಪಿಯವರು ಯಾವುದೇ ಕಾಳಜಿ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next