Advertisement

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಟಿಬದ್ದ: ಬಿಜೆಪಿ

03:48 PM Nov 21, 2018 | Team Udayavani |

ಲಕ್ನೋ : ಅಯೋಧ್ಯೆಯಲ್ಲಿ ಇದೇ ನ.25ರಂದು ಧರ್ಮ ಸಭೆ ನಡೆಯಲಿರುವುದಕ್ಕೆ ಮೊದಲೇ ಉತ್ತರಪ್ರದೇಶ ರಾಜ್ಯ ಬಿಜೆಪಿ ಮುಖ್ಯಸ್ಥ ಮಹೇಂದ್ರ ನಾಥ ಪಾಂಡೆ ಅವರು ಇಂದು ಬುಧವಾರ “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾವು ಕಟಿಬದ್ಧರಾಗಿದ್ದೇವೆ; ರಾಮ ಮಂದಿರ ನಿರ್ಮಾಣವನ್ನು ಒಂದು ರಾಜಕೀಯ ಠರಾವಾಗಿ ಕೈಗೊಂಡಿರುವ ದೇಶದ ಏಕೈಕ ಪಕ್ಷ ನಮ್ಮದಾಗಿದೆ’ ಎಂದು ಹೇಳಿದ್ದಾರೆ. 

Advertisement

ಹಾಗಿದ್ದರೂ 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯ ರಾಮ ಮಂದಿರ ನಿರ್ಮಾಣವನ್ನು ಒಂದು ವಿಷಯವನ್ನಾಗಿ ಮಾಡುವುದಿಲ್ಲ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ.

ನ.25ರ ಧರ್ಮ ಸಭೆಗೆ ಸಂಬಂಧಿಸಿದಂತೆ ಬಿಜೆಪಿ ತೆರೆಮರೆಗೆ ಸರಿಯುವ ಪ್ರಶ್ನೆಯೇ ಇಲ್ಲ; ಬಿಜೆಪಿಯು ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಡಳಿತ ಪಕ್ಷವಾಗಿ ಜನಸೇವೆಯಲ್ಲಿ ತೊಡಗಿಕೊಂಡಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next