Advertisement

ಬಿಜೆಪಿ ಸಂಸದರಿಗೆ 6000 ಡಿಡಿ ಕಳಿಸುತ್ತೇವೆ: ಕೋನರಡ್ಡಿ

01:20 AM Feb 04, 2019 | Team Udayavani |

ವಿಜಯಪುರ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಬದಲು ವಾರ್ಷಿಕ 6 ಸಾವಿರ ರೂ.ಕೊಡುವ ಘೋಷಣೆ ಮಾಡಿದೆ. ಈ ಸರ್ಕಾರ ರೈತರಿಗೆ ಭಿಕ್ಷೆ ಕೊಡುತ್ತಿದೆಯೇ, ಇದೊಂದು ಕಣ್ಣೊರೆಸುವ ತಂತ್ರವಷ್ಟೇ. ಕನಿಷ್ಠ 6 ಲಕ್ಷ ರೂ.ಕೊಡಲಿ, ಇಲ್ಲವಾದಲ್ಲಿ ಬಿಜೆಪಿ ಸಂಸದರಿಗೆ ನಾವೇ ವಾರ್ಷಿಕ 6 ಸಾವಿರ ರೂ.ಡಿಡಿ ಕಳಿಸುತ್ತೇವೆ ಎಂದು ಜೆಡಿಎಸ್‌ ಮಾಜಿ ಶಾಸಕ ಎನ್‌.ಎಚ್.ಕೋನರಡ್ಡಿ ಟೀಕಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರಿಗೆ ಅವರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ರೈತರಿಗೆ ಗೌರವ ಸಮ್ಮತ ಪ್ರೋತ್ಸಾಹ ಧನ ನೀಡಬೇಕಿತ್ತು. ಆದರೆ ಚುನಾವಣೆ ಹೊಸ್ತಿಲಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ವಾಸ್ತವವಾಗಿ ಉಪಯೋಗ ಇಲ್ಲದ ಘೋಷಣೆ ಮಾಡಿದೆ. ಅಧಿಕಾರ ದಾಹದಿಂದ ಮೆರೆಯುತ್ತಿರುವ ಬಿಜೆಪಿ ನಾಯಕರಿಗೆ ರೈತರ ಕುರಿತು ಪ್ರಾಮಾಣಿಕ ಕಾಳಜಿ ಇಲ್ಲ. ರಾಜ್ಯ ನಾಯಕರಿಗಂತೂ ಜನ ಕಲ್ಯಾಣ ಕೆಲಸವೇ ಗೊತ್ತಿಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದರೂ ಮೈತ್ರಿ ಸರ್ಕಾರ ಪತನ ಮಾಡುವ ಕುತಂತ್ರ ಮಾಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next