Advertisement

“ಹಿಂದೂ ಮುಖಂಡರಿಗೆ ಹೆಚ್ಚಿನ ಭದ್ರತೆ ಕೊಟ್ಟಿದ್ದೇವೆ’

10:46 PM Mar 09, 2020 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಹಾಗೂ ಹಿಂದೂ ಮುಖಂಡರಿಗೆ ಸೂಕ್ತ ಭದ್ರತೆ ನೀಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪತ್ರಕರ್ತರ ಜತೆ ಮಾತನಾಡಿ, ಮೋಹನ್‌ ಭಾಗವತ್‌ ಹಾಗೂ ಇತರ ಹಿಂದೂ ಮುಖಂಡರ ಹತ್ಯೆಗೆ ಗ್ಲೋಬಲ್‌ ಟೆರರಿಸ್ಟ್‌ ಗ್ರೂಪ್‌(ಜಿಟಿಜಿ) ಸಂಚು ರೂಪಿಸಿದ್ದು, ಆ ಬಗ್ಗೆ ಕೇಂದ್ರ ಗುಪ್ತಚರ ದಳದ ಮಾಹಿತಿ ಕುರಿತ ಪ್ರತಿಕ್ರಿಯೆ ನೀಡಿದರು.

Advertisement

“ಮೋಹನ್‌ ಭಾಗವತ್‌ ಅವರಿಗೆ ಕೇಂದ್ರದಿಂದ ಝಡ್‌ ಪ್ಲಸ್‌ ಸೆಕ್ಯೂರಿಟಿ ಕೊಡಲಾ ಗಿದೆ. ಹೀಗಾಗಿ ಅದಕ್ಕೆ ತಕ್ಕಂತೆ ನಾವೂ ಅವರಿಗೆ ಭದ್ರತೆ ಕೊಟ್ಟಿ ದ್ದೇವೆ. ಸಂಘಟಿತವಾಗಿ ಉಗ್ರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ರಾಜ್ಯದ ಪೊಲೀಸರು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರವಾಗಿ ನಿಗಾವಹಿಸಿವೆ. ಉಗ್ರ ಚಟುವಟಿಕೆಗಳನ್ನು ಪದೇ ಪದೆ ಭಗ್ನಗೊಳಿಸುತ್ತಿವೆ. ಜತೆಗೆ ಶಂಕಿತರನ್ನು ಬಂಧಿಸುತ್ತಿವೆ. ಅಲ್ಲದೆ, ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next