Advertisement

ನೀರಿಕ್ಷಕರ ವಾಹನ ಪಲ್ಟಿ: ಮೂವರಿಗೆ ಗಾಯ

12:24 PM Jul 29, 2018 | Team Udayavani |

ಎಚ್‌.ಡಿ.ಕೋಟೆ: ವಾಹನದ ಪ್ರಮುಖ ಆಕ್ಸಲ್‌ ರಾಡ್‌ ತುಂಡಾದ ಪರಿಣಾಮ ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆ ವೃತ್ತ ನಿರೀಕ್ಷಕರ ಜೀಪ್‌ ಪಲ್ಟಿ ಹೊಡೆದಿದ್ದು, ವೃತ್ತ ನಿರೀಕ್ಷಕ ಹರೀಶ್‌ ಕುಮಾರ್‌ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ 9.30ರಲ್ಲಿ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆಯ ಮಾದಾಪುರ ಸಮೀಪ ಜರುಗಿದೆ. 

Advertisement

ಕರ್ತವ್ಯ ನಿಮಿತ್ತ ದೂರದ ಮೈಸೂರಿಗೆ ತೆರಳಿ ವಾಪಸ್‌ ಆಗುತ್ತಿದ್ದ ವೇಳೆ ಮೈಸೂರು ಮಾನಂದವಾಡಿ ಮಾರ್ಗ ಮಧ್ಯೆ ಸಿಗುವ ಮಾದಾಪುರ ಗ್ರಾಮದ ಸಮೀಪ ಘಟನೆ ನಡೆದಿದ್ದು, ವಾಹನದಲ್ಲಿದ್ದ ವೃತ್ತ ನಿರೀಕ್ಷಕ ಹರೀಶ್‌ಕುಮಾರ್‌, ಚಾಲಕ ಪುಟ್ಟಸ್ವಾಮಿ ಹಾಗೂ ವಾಹನ ಚಾಲನೆ ಮಾಡುತ್ತಿದ್ದ ಮತ್ತೋರ್ವ ಚಾಲಕ ಗುರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡಿದ್ದವರನ್ನು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಚಾಲಕ ಗುರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತ ಕಂಡ ಕೂಡಲೇ ಸಾರ್ವಜನಿಕರು ಪೊಲೀಸ್‌ ಠಾಣೆ ಕರೆಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಗಾಯಾಳುಗಳನ್ನು ವಾಹನದಿಂದ ಹೊರ ತೆಗೆದು ಚಿಕಿತ್ಸೆಗೆ ಕಳುಹಿಸಲು ವಾಹನದ ವ್ಯವಸ್ಥೆ ಮಾಡಿ ನೆರವಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next