Advertisement

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

12:38 AM Apr 28, 2024 | Team Udayavani |

ಕುಂದಾಪುರ: ಹಂಗಳೂರು ಗ್ರಾಮದ ರಾ.ಹೆ. 66ರಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಮಿನಿ ಗೂಡ್ಸ್‌ ವಾಹನ ಢಿಕ್ಕಿಯಾದ ಪರಿಣಾಮ ಸಾವನ್ನಪ್ಪಿದ ಘಟನೆ ಎ.26ರ ಅಪರಾಹ್ನ 2.15ರ ಸುಮಾರಿಗೆ ಸಂಭವಿಸಿದೆ.

Advertisement

ವಾಹನ ಢಿಕ್ಕಿಯಾದ ಪರಿಣಾಮ ಶೋಭಾ ಬಿಲ್ಲವ (65)ಅವರು ರಸ್ತೆ ಬಿದ್ದಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಚಾಲಕ ಕೆಂಚಪ್ಪ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯ: ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಮೇಲ್ಕೇರಿಯ ನಿವಾಸಿ ಕೇಶವ (60) ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 27ರಂದು ಸಂಭವಿಸಿದೆ.

ಕೇಶವ ಅವರು ಮೂಗರಾಗಿದ್ದು, ಅನಾರೋಗ್ಯದಿಂದಲೂ ಬಳಲುತ್ತಿದ್ದರು.ಸಹೋದರ ಮಾಧವ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹಾರ್ಮಣ್‌: ಅಪರಿಚಿತ ಗೋಡೆ ಕೆಡವಿದ ಬಗ್ಗೆ ದೂರು
ಕೊಲ್ಲೂರು: ಚಿತ್ತೂರು ಗ್ರಾಮದ ಹಾರ್ಮಣ್‌ ಎಂಬಲ್ಲಿನ ನಿವಾಸಿ ವಿಜಯಲಕ್ಷ್ಮೀ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಅಪರಿಚಿತ ವ್ಯಕ್ತಿ ಮನೆ ಎಡಬದಿಯ ಗೋಡೆ ಕೆಡವಿ ಹಾಕಿ ಹಾನಿಗೊಳಿಸಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂದರ್ಭದಲ್ಲಿ ದನವೊಂದು ವಿಜಯಲಕ್ಷ್ಮೀ ಅವರ ಜಾಗಕ್ಕೆ ನುಗ್ಗಿ ತೋಟದಲ್ಲಿದ್ದ ಬಾಳೆಗಿಡ, ಅಡಿಕೆ, ತೆಂಗಿನ ಗಿಡ ಹಾಗೂ ಹೂವಿನ ಗಿಡಗಳನ್ನು ಹಾಳು ಮಾಡಿದ್ದು, ಸುಮಾರು 10ಸಾವಿರ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next