Advertisement

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

01:59 AM Apr 30, 2024 | Team Udayavani |

ಕಾರ್ಕಳ: ಮಾಳ ಘಾಟಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನವೊಂದು ಅಪಘಾತಕ್ಕೆ ಒಳಗಾದ ಘಟನೆ ನಡೆದಿದೆ. ಮಾಳ ಘಾಟಿ ರಸ್ತೆಯ ಅಂಬಿದ ಗುಂಡಿ ತಿರುವಿನಲ್ಲಿ ಎ. 28ರ ನಸುಕಿನಲ್ಲಿ ಈ ಘಟನೆ ನಡೆದಿದೆ.

Advertisement

ಶೃಂಗೇರಿ ಕಡೆಯಿಂದ ಬಜಗೋಳಿಗೆ ಬರುತಿದ್ದಾಗ ಈ ಘಟನೆ ಸಂಭವಿಸಿದ್ದು ಚಾಲಕ ಹಾಗೂ ಸಹ ಪ್ರಯಾಣಿಕ ನಾಗರಾಜ್‌ ಗಾಯಗೊಂಡಿದ್ದಾರೆ. ವಾಹನ ಜಖಂಗೊಂಡಿದೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ
ಕಾರ್ಕಳ: ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಆರೋಪದಲ್ಲಿ ನಿಟ್ಟೆ ಸೆವೆರಿನ್‌ ಡಿ’ ಸೋಜಾ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋರಿನ್‌ ಸಲ್ದಾನ ಅವರು ತಮ್ಮ ಮನೆಯ ಶೌಚಾಲಯ ಗುಂಡಿಯನ್ನು ಜೆಸಿಬಿ ಮೂಲಕ ಮುಚ್ಚುತಿದ್ದಾಗ ಸೆವೆರಿನ್‌ ಡಿ’ ಸೋಜಾ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಈ ಸಂದರ್ಭ ನಡೆದಿರುವ ಹಲ್ಲೆಯಿಂದ ಫ್ಲೋರಿನ್‌ ಸಲ್ದಾನ ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರ್ಗಾನ: ಕೀಟನಾಶಕ ಸೇವಿಸಿ ಸಾವು
ಕಾರ್ಕಳ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿರ್ಗಾನ ನಿವಾಸಿ ಧರ್ಣಪ್ಪ (61) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಿಂದ ಅವರ ಕೈಗೆ ಗಾಯವಾಗಿತ್ತು. ಆಗಾಗ್ಗೆ ನೋವು ಬರುತ್ತಿದ್ದುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ನೊಂದು ಅವರು ಎ.24ರಂದು ಕೀಟನಾಶಕ ಸೇವಿಸಿದ್ದರು. ಬಳಿಕ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಎ.28ರಂದು ಮೃತಪಟ್ಟರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next